ಮಸೀದಿ ಉಳಿಸಲು ಹಲವರ ಜೀವಹೋಗಿದೆ, ನನಗೆ ದುಃಖವಾಗಿದೆ: ಮುಲಾಯಂ ಸಿಂಗ್ ಯಾದವ್

Update: 2017-02-16 09:19 GMT

ಲಕ್ನೊ,ಫೆ. 16: ಲಕ್ನೊದ ಕೆಂಟ್ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಹಾಗೂ ತನ್ನ ಚಿಕ್ಕಸೊಸೆ ಅಪರ್ಣರಿಗಾಗಿ ಮತಯಾಚಿಸಿದ ಮುಲಾಯಂ ಸಿಂಗ್ ಮಸೀದಿ ಉಳಿಸಲಿಕ್ಕಾಗಿ ತಾನು ಅನೇಕ ಗುಂಡುಗಳನ್ನು ಹಾರಿಸುವಂತೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಉತ್ತರಪ್ರದೇಶದ ಕಾರಣದಿಂದ ಪ್ರಧಾನಿ ಆಗಿದ್ದಾರೆ:

   ಗುಂಡು ಹಾರಿಸುವಂತೆ ಮಾಡುವುದು ಬಹಳ ದುಃಖದ ವಿಚಾರವಾಗಿದೆ. ಮಸೀದಿ ಉಳಿಯದಿದ್ದರೆ ಮುಸ್ಲಿಮರಿಗೆ ಅವರ ಆಗ್ರಹವನ್ನು ಆಲಿಸುವವರು ಯಾರು ಇಲ್ಲ ಎಂದು ಅನಿಸುತ್ತಿತ್ತು. ಅದು ದೇಶದ ಏಕತೆಗೆ ಸವಾಲಾಗಿತ್ತು. ಆದ್ದರಿಂದ ನಾನು ಮಸೀದಿ ಉಳಿಸಿದೆ. ಮತ್ತು ಮಸೀದಿ ಉಳಿಸುವುದಕ್ಕಾಗಿ ಹಲವರು ಬಲಿಯಾಗಿದ್ದಾರೆ. ಇದರಲ್ಲಿ ನನಗೆ ದುಃಖವಿದೆ ಎಂದು ಮುಲಾಯಂಸಿಂಗ್ ಹೇಳಿದರು. ಮೋದಿಯವರನ್ನು ಟೀಕಿಸಿದ ಅವರು ಮೋದಿ ಉತ್ತರಪ್ರದೇಶದ ಕಾರಣದಿಂದ ಇಂದು ಪ್ರಧಾನಿಯಾಗಿದ್ದಾರೆ. ಆದರೆ ಕೊ ಟ್ಟ ಮಾತನ್ನು ಮೋದಿ ಈಡೇರಿಸಿಲ್ಲ ಎಂದು ಮುಲಾಯಂ ಈ ಸಂದರ್ಭದಲ್ಲಿ ಹೇಳಿದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News