ಸಚಿವ ಪ್ರಮೋದ್ ಮಧ್ವರಾಜ್ ಪ್ರವಾಸ

Update: 2017-02-16 18:28 GMT

ಉಡುಪಿ, ಫೆ.16: ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಫೆ.17ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 9ಕ್ಕೆ ಬಡಾನಿಡಿಯೂರು ಚಂದ್ರ ಸಾಲ್ಯಾನ್ ಮನೆ ಬಳಿ ರಸ್ತೆ, ಗ್ರಾಪಂ ಕಟ್ಟಡ, ಪಂಡರಿನಾಥ ಭಜನಾ ಮಂದಿರ ರಸ್ತೆ ಹಾಗೂ ಕದಿಕೆ ಆಭರಣ ಗೆಸ್ಟ್‌ಹೌಸ್ ರಸ್ತೆ ಉದ್ಘಾಟನೆ, 10ಕ್ಕೆ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ, 10:30ಕ್ಕೆ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಭೆ, ಅಪರಾಹ್ನ 3ಕ್ಕೆ ಬ್ರಹ್ಮಗಿರಿ ಸೈಂಟ್ ಸಿಸಿಲಿ ಸ್ಕೂಲ್‌ನಲ್ಲಿ ಅಜ್ಜರಕಾಡು ವಾರ್ಡಿನ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News