ಮೆಟ್ಟಿಲಿನಿಂದ ಬಿದ್ದು ತಾಯಿ ಮೃತ್ಯು: ಮಗನ ಆತ್ಮಹತ್ಯೆ

Update: 2017-02-17 18:22 GMT

ಉಡುಪಿ, ೆ.17: ಇಲ್ಲಿನ ಕಡಿಯಾಳಿಯಲ್ಲಿರುವ ಸಚ್ಚಿದಾನಂದ ರೆಸಿಡೆನ್ಸಿಯ ನೆಲ ಅಂತಸ್ತಿನ ಮೆಟ್ಟಿಲುಗಳಿಂದ ಬಿದ್ದು ಮಹಿಳೆಯೋರ್ವರು ಮೃತಪಟ್ಟಿದ್ದು, ಇದೇ ಚಿಂತೆಯಲ್ಲಿ ಅವರ ಮಗನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ೆ.17ರಂದು ಬೆಳಗ್ಗೆ 7ಗಂಟೆಗೆ ನಡೆದಿದೆ.

ಉದ್ಯಾವರ ಕೇದರ್ ನಿವಾಸಿ ರಾಜಶ್ರೀ ಮತ್ತು ಅವರ ಮಗ ಉಜ್ವಲ್(28)ಮೃತಪಟ್ಟವರು. ರಾಜಶ್ರೀ ಸಚ್ಚಿದಾನಂದ ರೆಸಿಡೆನ್ಸಿ ಕಟ್ಟಡದಲ್ಲಿ ರುವ ಟೇಸ್ಟಿಲ್ಯಾಂಡ್ ಎಂಬ ಹೋಟೆಲಿನಲ್ಲಿ ಕೆಲಸ ಮಾಡುತ್ತಿ ದ್ದರೆನ್ನಲಾಗಿದೆ. ಅವರು ೆ.16ರಂದು ಅಪರಾಹ್ನ 2:45ರ ಸುಮಾರಿಗೆ ತಮ್ಮ ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ನೆಲ ಅಂತಸ್ತಿಗೆ ಹೋಗುವ ಮೆಟ್ಟಿಲಿನಿಂದ ಆಕಸ್ಮಿಕವಾಗಿ ಆಯ ತಪ್ಪಿಕೆಳ ಅಂತಸ್ತಿನ ಪ್ಯಾಸೇಜ್‌ಗೆ ಬಿದ್ದು ಗಂಭೀರವಾಗಿ ಗಾಯ ಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ಚಿಂತೆಯಲ್ಲಿ ಇವರ ಹಿರಿಯ ಮಗ ಉಜ್ವಲ್ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಇವರಿಗೆ ಇಬ್ಬರು ತಮ್ಮಂದಿರು ಇದ್ದಾರೆನ್ನಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News