ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2017-02-18 18:05 GMT

ಕುಂದಾಪುರ, ಫೆ.18: ವೈಯಕ್ತಿಕ ಕಾರಣದಿಂದ ಮನನೊಂದ ವಡೇರ ಹೋಬಳಿ ಗ್ರಾಮದ ಹೊಟ್ಲಬೈಲು ನಿವಾಸಿ ಸುರೇಶ್ ಶೆಟ್ಟಿ ಎಂಬವರ ಪತ್ನಿ ಸುರೇಖ(36) ಎಂಬವರು ಫೆ.17ರಂದು ಅಪರಾಹ್ನ ಮನೆಯ ಬಾವಿಯ ನೀರು ಸೇದುವ ಹಗ್ಗದಿಂದ ಮಲಗುವ ಕೋಣೆಯ ಅಡ್ಡ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ತಂದೆಯ ಅನಾರೋಗ್ಯದಿಂದ ಮನನೊಂದ ಸಾಣೂರು ಕಾಜರಬೆಟ್ಟು ನಿವಾಸಿ ಪ್ರದೀಪ (28) ಎಂಬವರು ಫೆ.17ರಂದು ರಾತ್ರಿ ಮನೆ ಸಮೀಪದ ಗದ್ದೆಯಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News