×
Ad

ಸುಳ್ಯ: ಛತ್ರಪತಿ ಶಿವಾಜಿ ಮಹಾರಾಜರ 390ನೆ ಜಯಂತಿ ಆಚರಣೆ

Update: 2017-02-19 20:36 IST

ಸುಳ್ಯ, ಫೆ.19: ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ, ಕ್ಷತ್ರೀಯ ಮರಾಠ ಸೇವಾ ಸಂಘ ಸುಳ್ಯ ಇದರ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 390ನೇ ಜಯಂತಿ ಆಚರಣೆ ಕಾರ್ಯಕ್ರಮವು ಸುಳ್ಯ ತಾ.ಪಂ. ಸಭಾಂಗಣದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಸುಳ್ಯ ಶಾಸಕ ಎಸ್.ಅಂಗಾರ ವಹಿಸಿದ್ದರು. ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾರದಾ ಮಹಿಳಾ ಶಾಲಾ ಉಪನ್ಯಾಸಕಿ ಗಾಯತ್ರಿ ಚಿದಾನಂದ ರಾವ್ ಸಿಂಧ್ಯಾ ವಿಶೇಷ ಉಪನ್ಯಾಸ ನೀಡಿದರು.

 ವೇದಿಕೆಯಲ್ಲಿ ಹರೀಶ್ ರೈ ಉಬರಡ್ಕ, ಮರಾಠ ಸೇವಾ ಸಂಘದ ಅಧ್ಯಕ್ಷ ಸುಂದರ ರಾವ್, ನಾರಾಯಣ ರಾವ್ ಮೊದಲಾದವರು ಉಪಸ್ಥಿತರಿದ್ದರು.
 ಸುಳ್ಯ ತಹಶೀಲ್ದಾರ್ ಗಣೇಶ್ ಸ್ವಾಗತಿಸಿದರು. ದಯಾನಂದ ಕೇರ್ಪಳ, ಸೋಮನಾಥ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.

 ಅಧಿಕಾರಿಗಳಾದ ಡಿ.ಟಿ.ದಯಾನಂದ, ಲಿಂಗಪ್ಪ ನಾಯ್ಕ, ವಿಶ್ವನಾಥ ರಾವ್, ಉಷಾ ಅವಿನ್ ರಂಗತ್ತಮಲೆ, ಸುಳ್ಯ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕ್ಷತ್ರೀಯ ಮರಾಠ ಸೇವಾ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News