×
Ad

ಕೊಲೆ-ದರೋಡೆಗೆ ಸಂಚು: 6 ಆರೋಪಿಗಳ ಸೆರೆ

Update: 2017-02-19 23:49 IST

ಮಂಗಳೂರು, ೆ.19: ವ್ಯಕ್ತಿಯೊಬ್ಬರ ಕೊಲೆ ಹಾಗೂ ಶ್ರೀಮಂತ ವ್ಯಕ್ತಿಗಳ ದರೋಡೆಗೆ ಸಂಚು ನಡೆಸಿದ್ದ 6 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ರವಿವಾರ ಬೆಳಗ್ಗೆ ತಣ್ಣೀರು ಬಾವಿಯಲ್ಲಿ ಬಂಸಿದ್ದಾರೆ. ಆರೋಪಿ ಗಳಿಂದ 2ಪಿಸ್ತೂಲ್, ಸಜೀವ ಗುಂಡುಗಳು, ಚೂರಿ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ವಶಪಡಿ ಸಿಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್ ಉಪಾಯುಕ್ತರಾದ ಕೆ.ಎಂ.ಶಾಂತರಾಜು ಮತ್ತು ಡಾ.ಸಂಜೀವ ಪಾಟೀಲ್ ರವಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಕೃಷ್ಣಾಪುರ 7ನೆ ಬ್ಲಾಕ್ ನಿವಾಸಿಗಳಾದ ಸ್ವಾನ್ ಯಾನೆ ಹುಸೈನ್ ಯಾನೆ ಸುಹೈನ್(33), ಮುಹಮ್ಮದ್ ೈಸಲ್ ಇಬ್ರಾಹೀಂ ಶೇಖ್(33), ಎಮ್ಮೆಕೆರೆ ಮೈದಾನ ಬಳಿ ನಿವಾಸಿ ಅಬ್ದುಲ್ ನಾಸಿರ್ ಯಾನೆ ಡಾನ್ ನಾಸಿರ್(34), ಮುಕ್ಕ ಮಸೀದಿ ಬಳಿ ನಿವಾಸಿ ಶಂಸುದ್ದೀನ್(27), ಉಳ್ಳಾಲ ಹಳೆಕೋಟೆ ನಿವಾಸಿಗಳಾದ ಉಮರ್ ಾರೂಕ್ ಯಾನೆ ಮಾನಾ ಾರೂಕ್(25), ಮುಹಮ್ಮದ್ ಅನ್ಸಾರ್(30) ಬಂತ ಆರೋಪಿಗಳು.

ಜೈಲ್‌ನಿಂದ ಇತ್ತೀಚೆಗಷ್ಟೆ ಬಿಡುಗಡೆಗೊಂಡಿದ್ದ ವಿರೋ ತಂಡದ ವ್ಯಕ್ತಿಯೊಬ್ಬರ ಕೊಲೆಗೆ ಆರೋಪಿ ಗಳು ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿ ಮಾರುತಿ ಸ್ವಿಪ್ಟ್ ಕಾರು ಹಾಗೂ ರಿಕ್ಷಾದಲ್ಲಿ ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಸಿಸಿಬಿ ಇನ್‌ಸ್ಪೆಕ್ಟರ್ ಸುನೀಲ್ ವೈ. ನಾಯ್ಕೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ತಣ್ಣೀರುಬಾವಿ ಬಳಿ ಆರೋಪಿಗಳನ್ನು ಬಂಸಿದ್ದರು. ಈ ಆರೋಪಿಗಳು ನಗರದ ಶ್ರಿಮಂತ ವ್ಯಕ್ತಿಗಳ ದರೋಡೆಗೂ ಯೋಜನೆ ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಡಿಸಿಪಿ ಶಾಂತರಾಜು ತಿಳಿಸಿದರು.

ಆರೋಪಿಗಳಿಂದ 2ದೇಶಿ ನಿರ್ಮಿತ ಪಿಸ್ತೂಲ್, 7ಸಜೀವ ಮದ್ದುಗುಂಡುಗಳು, 2 ಚೂರಿ, 3 ಮೊಬೈಲ್ ೆನ್‌ಗಳು, ಮಾರುತಿ ಸ್ವ್‌ಟಿ ಕಾರು, ಬಜಾಜ್ ಆಟೊ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ಮುಂದಿನ ತನಿಖೆಗಾಗಿ ಪಣಂಬೂರು ಪೊಲೀಸರಿಗೆ ಹಸ್ತಾಂತ ರಿಸಲಾಗಿದೆ.

ಸಿಸಿಬಿ ಇನ್‌ಸ್ಪೆಕ್ಟರ್ ಸುನೀಲ್ ವೈ. ನಾಯಕ್, ಎಸ್ಸೆ ಶ್ಯಾಮ್‌ಸುಂದರ್, ಸಿಬ್ಬಂದಿ ರಾಮ ಪೂಜಾರಿ, ಶೀನಪ್ಪ, ಗಣೇಶ್, ಚಂದ್ರಹಾಸ ಸನಿಲ್, ಚಂದ್ರಶೇಖರ, ಚಂದ್ರ, ಯೋಗೀಶ್, ಸುನೀಲ್, ಪ್ರಶಾಂತ್ ಶೆಟ್ಟಿ, ರಾಜೇಂದ್ರ ಪ್ರಸಾದ್, ದಾಮೋದರ ಮಣಿ, ಅಬ್ದುಲ್ ಜಬ್ಬಾರ್, ಸುೀರ್ ಶೆಟ್ಟಿ, ಇಸಾಕ್, ಆಶಿತ್, ವಿಶಾಲ್ ಡಿಸೋಜ, ತೇಜಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ದರೋಡೆಗೆ ಸಂಚು ರೂಪಿಸಿದ ಬಂತ 6 ಮಂದಿಯಲ್ಲಿ 5 ಮಂದಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

 ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕೊಲೆ, ಕೊಲೆಗೆ ಯತ್ನ, ಅಪಹರಣ, ದರೋಡೆ, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಸಹಿತ ಒಟ್ಟು 23 ಪ್ರಕರಣಗಳು ಸ್ವಾನ್ ಮೇಲೆ ದಾಖಲಾಗಿದೆ. ಗೂಂಡಾ ಕಾಯ್ದೆಯಡಿ ಪ್ರಕರಣವೂ ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆದು 2 ತಿಂಗಳ ಹಿಂದೆ ಬಿಡುಗಡೆಯಾಗಿದ್ದ. ಮುಹಮ್ಮದ್ ೈಸಲ್ ಕೂಡ ಹಲವು ಪ್ರಕರಣ ದಾಖಲಾಗಿದೆ. ಕೊಲೆಗೆ ಯತ್ನ, ದರೋಡೆ, ಜೈಲಿನಲ್ಲಿ ಹಲ್ಲೆ ಸಹಿತ 8 ಪ್ರಕರಣ ಈತನ ಮೇಲೆ ದಾಖಲಾಗಿದೆ. ಶಂಸುದ್ದೀನ್ 8ತಿಂಗಳ ಹಿಂದೆ ಜೈಲಿನಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ. ಈತನ ಮೇಲೆ ಕೊಲೆ, ಕೊಲೆಗೆ ಯತ್ನ, ಅಪಹರಣ, ದರೋಡೆ, ಜೈಲಿನಲ್ಲಿ ಗಲಾಟೆ ಸಹಿತ 8 ಪ್ರಕರಣಗಳಿವೆ. ಅಬ್ದುಲ್ ನಾಸಿರ್‌ನ ಮೇಲೆ ಕೊಲೆ ಯತ್ನ, ಅಪಹರಣ, ದರೋಡೆ, ಕೋಮುಗಲಭೆ ಸಹಿತ 9 ಪ್ರಕರಣ ದಾಖಲಾಗಿವೆ. ಉಮರ್ ಾರೂಕ್‌ನ ವಿರುದ್ಧ ಕೊಲೆ ಯತ್ನ, ದರೋಡೆ, ದರೋಡೆ ಯತ್ನ ಸಹಿತ 3 ಪ್ರಕರಣಗಳಿವೆ. ಮುಹಮ್ಮದ್ ಅನ್ಸಾರ್ ವಿರುದ್ಧ ಯಾವುದೇ ಇದುವರೆಗೆ ಯಾವುದೇ ಪ್ರಕರಣವಿಲ್ಲ. ಈತ ಆರೋಪಿಗಳ ಬಳಿಯಿದ್ದ ಮಾರಕಾ ಯುಧಗಳನ್ನು ಸಂಗ್ರಹಿಸಿ, ಅಡಗಿಸಿಡಲು ಸಹಕರಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News