ಮಂಗಳೂರು: ಬೀದಿ ಬದಿ ವ್ಯಾಪಾರಸ್ಥರಿಂದ ಮನವಿ
Update: 2017-02-21 19:02 IST
ಮಂಗಳೂರು, ಫೆ.21: ನಗದ ಬೀದಿ-ಬದಿ ವ್ಯಾಪಾರಸ್ಥರ ಬೇಡಿಕೆ ಈಡೇರಿಸಲು ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರಿಗೆ ಬೀದಿ ಬದಿ ವ್ಯಾಪಾಸ್ಥರು ಮನವಿ ಸಲ್ಲಿಸಿದರು.
ಪಾಲಿಕೆ ವ್ಯಾಪ್ತಿಯ ಬೀದಿಬದಿಯಲ್ಲಿ ವ್ಯಾಪಾರ ನಡೆಸುವ ಅವಿದ್ಯಾವಂತ ಬಡವರು ಇತ್ತೀಚೆಗೆ ಹಲವಾರು ರೀತಿಯ ತೊಂದರೆಗಳನ್ನು ಅನುಭಸುವಿತ್ತಿದ್ದಾರೆ. ಆ ಹಿನ್ನೆಲಯಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರೊಂದಿಗೆ ಐವನ್ ಡಿಸೋಜ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸ್ಥಳದಲ್ಲಿ ಹಾಜರಿದ್ದ ಮನಪಾ ಆಯುಕ್ತ ನಝೀರ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಂದಾಯ ಅಧಿಕಾರಿ ಪ್ರವೀಣ್, ಸಂಘದ ಅಧ್ಯಕ್ಷ ಮುಹಮ್ಮದ್ ರಫಿ, ಎಮ್ಮೆಕೆರೆ ಸಲಾಂ, ಹಕೀಂ ವಾಮಂಜೂರು, ಮುಹಮ್ಮದ್ ಹನೀಫ್, ಜಯಾನಂದ, ಅಬ್ದುಲ್ ಖಾದರ್, ಹಸನ್ ಕುದ್ರೋಳಿ, ಅವಿನಾಶ್ ಜೊತೆಗಿದ್ದರು.