ಕಾಸರಗೋಡು: ಖಾಸಗಿ ಬಸ್ ಉರುಳಿ ಬಿದ್ದು ಹತ್ತಕ್ಕೂ ಅಧಿಕ ಜನರಿಗೆ ಗಾಯ
ಕಾಸರಗೋಡು, ಫೆ. 21: ಖಾಸಗಿ ಬಸ್ ಉರುಳಿ ಬಿದ್ದು ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ರಾಜಪುರ ಸಮೀಪದ
ರಾಣಿಪುರದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮಂಗಳವಾರ ರಾಣಿಪುರದಲ್ಲಿರುವ ಪ್ರವಾಸಿ ಕೇಂದ್ರಕ್ಕೆ ತೆರಳಿ ಮರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು 30 ಅಡಿಯಷ್ಟು ಆಳಕ್ಕೆ ಉರುಳಿ ಬಿದ್ದು , ಈ ದುರ್ಘಟನೆ ನಡೆದಿದೆ.
ವೆಳ್ಳಿಕೋತ್ ನಲ್ಲಿರುವ ಸ್ವ ಉದ್ಯೋಗ ತರಬೇತಿ ಕೇಂದ್ರದ ತರಬೇತು ದಾರರನ್ನು ಕರೆದೊಯ್ಯುತ್ತಿದ್ದ ಟೂರಿಸ್ಟ್ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ.
ಬಸ್ಸು ಪ್ರಯಾಣಿಕರಾದ ಸಜಿತ ( 30) ರಮ್ಯ ( 24) , ರಾಖಿ ( 22) ಶೈಲಜಾ ( 27), ಗೀತಾ ಮಧು ( 36) ಅನಿಷಾ ( 22) ಅನಿತಾ ( 36), ಸರಿತಾ ( 36), ಜ್ಯೋತಿ ( 27), ಶ್ರುತಿ (24) , ಚಾಲಕ ಅಬ್ದುಲ್ ಲತೀಫ್ ( 30) ಗಾಯಗೊಂಡಿದ್ದಾರೆ.
ಈ ಪೈಕಿ ಗಂಭೀರ ಗಾಯಗೊಂಡ ಸಜಿತ ( 30) ಇವರನ್ನು ಕಾಞ೦ಗಾಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದರು ಎಂದು ತಿಳಿದುಬಂದಿದೆ.