ನ್ಯಾಯಾಲಯಗಳ ಮೇಲೆ ದಾಳಿ ಖಂಡಿಸಿ ಪಾಕ್ ವಕೀಲರ ಪ್ರತಿಭಟನೆ

Update: 2017-02-22 15:53 GMT

ಪೇಶಾವರ, ಫೆ. 22: ಖೈಬರ್ ಪಖ್ತೂಂಖ್ವ ಪ್ರಾಂತದಲ್ಲಿ ನ್ಯಾಯಾಲಯವೊಂದರ ಮೇಲೆ ತಾಲಿಬಾನಿ ಆತ್ಮಹತ್ಯಾ ಬಾಂಬರ್‌ಗಳು ದಾಳಿ ನಡೆಸಿದ ಒಂದು ದಿನದ ಬಳಿಕ, ನ್ಯಾಯಾಲಯಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡಬೇಕೆಂದು ಒತ್ತಾಯಿಸಿ ಪೇಶಾವರದಲ್ಲಿ ವಕೀಲರು ಬುಧವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿದರು.

ನಿನ್ನೆ ನಡೆದ ದಾಳಿಯಲ್ಲಿ ಏಳು ಮಂದಿ ಹತರಾಗಿದ್ದಾರೆ.

ಪ್ರಾಂತದಲ್ಲಿ ನ್ಯಾಯಾಂಗದ ಮೇಲೆ ನಡೆಯುತ್ತಿರುವ ಆಕ್ರಮಣದ ವಿರುದ್ಧ ಪ್ರತಿಭಟಿಸಲು ಹಾಗೂ ನ್ಯಾಯಾಲಯಗಳ ಆವರಣಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ಒತ್ತಾಯಿಸಿ ವಕೀಲರು ಒಂದು ದಿನದ ನ್ಯಾಯಾಲಯ ಕಲಾಪ ಬಹಿಷ್ಕಾರ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News