×
Ad

ಕೇರಳ ಸಿಎಂ ಆಗಮನ ವಿರೋಧಿಸಿ ಹರತಾಳ, ಸಿಪಿಎಂ ಕಾರ್ಯಕ್ರಮಕ್ಕೆ ಅಲ್ಲ: ವಿಹಿಂಪ

Update: 2017-02-23 21:39 IST

ಮಂಗಳೂರು, ಫೆ.23: ಕೇರಳ ಸಿಎಂ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸುತ್ತಿರುವುದನ್ನು ವಿರೋಧಿಸಿ ಫೆ. 25ರಂದು ಹರತಾಳಕ್ಕೆ ಕರೆ ನೀಡಿರುವ ಹಿನ್ನೆಲೆ ಹರತಾಳದಲ್ಲಿ ಶಾಂತ ರೀತಿಯಲ್ಲಿ ಭಾಗವಹಿಸಲು ವಿಹಿಂಪ ಕರೆ ನೀಡಿದೆ.

ನಮ್ಮ ವಿರೋಧ ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಹೊರತು, ಸಿಪಿಎಂ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ವಿರೋಧವಿಲ್ಲ. ಈ ಬಗ್ಗೆ ಯಾವುದೇ ವದಂತಿಗಳಿಗೆ ಆಸ್ಪದ ನಿಡಬೇಡಿ. ಶಾಂತಿಯುತವಾಗಿ ಹರತಾಳ ಭಾಗವಹಿಸಿ ಎಂದು ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News