ಫೆ.26ರಂದು ಬಿ.ಸಿ.ರೋಡ್ ಪಾಲಿಕ್ಲಿನಿಕ್‌ನಲ್ಲಿ ಉಚಿತ ಥೈರಾಯ್ಡಿ, ಮಧುಮೇಹ ತಪಾಸಣಾ ಶಿಬಿರ

Update: 2017-02-24 06:06 GMT

ಬಂಟ್ವಾಳ, ಫೆ. 21: ಬಿ.ಸಿ.ರೋಡ್ ಪಾಲಿಕ್ಲಿನಿಕ್‌ನಲ್ಲಿ ಉಚಿತ ಥೈರಾಯ್ಡ್ ಹಾಗೂ ಮಧುಮೇಹ ತಪಾಸಣಾ ಶಿಬಿರ ಫೆಬ್ರವರಿ 26ರಂದು ಬೆಳಗ್ಗೆ 9ರಿಂದ 12:30ರಿಂದ ನಡೆಯಲಿದೆ. ಶಿಬಿರದಲ್ಲಿ ಮಂಗಳೂರಿನ ಖ್ಯಾತ ಥೈರಾಯ್ಡ್ ಹಾಗೂ ಮಧುಮೇಹ ರೋಗಗಳ ತಜ್ಞ ವೈದ್ಯ ಡಾ. ಶ್ರೀನಾಥ್ ಪಿ. ಶೆಟ್ಟಿ ಭಾಗವಹಿಸಲಿದ್ದಾರೆ. ರೋಗದ ಲಕ್ಷಣಗಳಾದ ವಿವರಿಸಲಾಗದ ದೇಹ ತೂಕ ಹೆಚ್ಚಳ, ಮುಖ ಮತ್ತು ಕಾಲುಗಳಲ್ಲಿ ಹೆಚ್ಚಳ, ಹೆದರಿಕೆ ಮತ್ತು ನಡುಕ, ಆಯಾಸ, ಕೂದಲು ಉದುರುವಿಕೆ, ಮಲಬದ್ಧತೆ, ಒಣ ತ್ವಚೆ, ಧ್ವನಿಯಲ್ಲಿ ಬದಲಾವಣೆ, ಅನಿಯಮಿತ ಮುಟ್ಟಾಗುವಿಕೆ ಕಂಡುಬಂದಲ್ಲಿ ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರದ ಉಚಿತ ಥೈರಾಯ್ಡಾ ಪರೀಕ್ಷೆ, ಉಚಿತ ಬ್ಲಡ್ ಶುಗರ್ ಪರೀಕ್ಷೆ, ಅಗತ್ಯವಿದ್ದವರಿಗೆ ಎಚ್‌ಬಿಎಒನ್‌ಸಿ ಪರೀಕ್ಷೆ ಹಾಗೂ ಮಧುಮೇಹಕ್ಕೆ ಆಹಾರ ತಜ್ಞರಿಂದ ಸಲಹೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 232322, 9481363943 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News