ಮಂಗಳೂರಿನಲ್ಲಿ ಸಂಘಪರಿವಾರದಿಂದ ಪ್ರತಿಭಟನೆ

Update: 2017-02-24 07:04 GMT

ಮಂಗಳೂರು, ಫೆ.24: ನಗರದಲ್ಲಿ ಫೆ.25ರಂದು ನಡೆಯುವ ಸೌಹಾರ್ದ ರ‍್ಯಾಲಿಗೆ ಆಗಮಿಸಲಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸಂಘ ಪರಿವಾರ ಶುಕ್ರವಾರ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್ ಮತ್ತಿತರರು ಭಾಗವಹಿಸಿದ್ದರು. ಬಿಜೆಪಿ, ಬಜರಂಗದಳ, ವಿಹಿಂಪ ಮೊದಲಾದ ಸಂಘಟನೆ ಕಾರ್ಯಕರ್ತರು ನಗರದ ಜ್ಯೋತಿ ಸರ್ಕಲ್ ನಿಂದ ನೆಹರೂ ಮೈದಾನದವರೆಗೆ ಮೆರವಣಿಗೆ ಮೂಲಕ ಸಾಗಿ ಪ್ರತಿಭಟನ ಸಭೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News