ಸೌಹಾರ್ದ ಸಮಾವೇಶದ ಬ್ಯಾನರ್, ಸ್ಟಿಕ್ಕರ್ ಗಳನ್ನು ಹರಿದು ಹಾಕಿಕೊಂಡು ಹೋದ ವಿಹಿಂಪ ಜಾಥಾ

Update: 2017-02-24 07:19 GMT

ಮಂಗಳೂರು, ಫೆ.24: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಗರಕ್ಕೆ ಆಗಮನ ಹಿನ್ನೆಲೆ ವಿಹಿಂಪ ಹಾಗೂ ಹಿಂದೂ ಜಾಗರಣ ವೇದಿಕೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡ ಕಾರ್ಯಕರ್ತರು ಹೋಗುವ ದಾರಿಯಲ್ಲಿ ಹಾಕಲಾಗಿದ್ದ ಸೌಹಾರ್ದ ಸಮಾವೇಶದ ಬ್ಯಾನರ್ ಗಳನ್ನು , ಸ್ಟಿಕ್ಕರ್ ಗಳನ್ನು ಹರಿದು ಕಾಲಿನಡಿಗೆ ಹಾಕಿ ತುಳಿದುಕೊಂಡೇ ಹೋದರು.

ಜಾಥಾದುದ್ದಕ್ಕೂ ಕೇರಳ ಮುಖ್ಯಮಂತ್ರಿ ಪಿಣರಾಯಿ ಅವರನ್ನು ಅವಾಚ್ಯ ಪದಗಳನ್ನು ಬಳಸಿ ಅವಹೇಳನ ಮಾಡುತ್ತಿರುವುದು ಕಂಡು ಬಂತು. ಇವುಗಳಿಗೆ ಅಲ್ಲಿದ್ದ ಪೊಲೀಸರು ಮೂಕಪ್ರೇಕ್ಷಕರಾದರು.

ಅಲ್ಲದೆ  ಬಸ್ ಗಳಿಗೆ ಫೆ.25ರಂದು ಹರತಾಳ ಎಂಬ ಪೋಸ್ಟರ್ ಗಳನ್ನು ಅಂಟಿಸಿದ ದೃಶ್ಯ ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News