ಕಾರು ಢಿಕ್ಕಿ: ಬೈಕ್ ಸಹ ಸವಾರ ಮೃತ್ಯು

Update: 2017-02-24 18:16 GMT

ಮಂಗಳೂರು, ಫೆ. 23: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಸಹ ಸವಾರನೋರ್ವ ಮೃತಪಟ್ಟಿರುವ ಘಟನೆ ಪಡೀಲ್ ರೈಲ್ವೆ ಓವರ್‌ಬ್ರಿಡ್ಜ್ ಬಳಿ ನಡೆದಿದೆ.

ಮೃತನನ್ನು ಪಡೀಲ್ ಕಣ್ಣೂರು ನಿವಾಸಿ ಮುಹಮ್ಮದ್ ಸಿನಾನ್ (19) ಎಂದು ಗುರುತಿಸಲಾಗಿದೆ.

ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸುತ್ತಿದ್ದರೆಂದು ಹೇಳಲಾಗಿದೆ. ಅಲ್ತಾಫ್ ಬೈಕ್ ಚಲಾಯಿಸಿದ್ದು, ಸಿನಾನ್ ಮತ್ತು ಅಫ್ರಿದಿ ಎಂಬವರು ಸಹಸವಾರರು. ಘಟನೆಲ್ಲಿ ಅಲ್ತಾಫ್ ಮತ್ತು ಅಫ್ರಿದಿ ಗಾಯಗೊಂಡಿದ್ದಾರೆ.

ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News