ಇಂದಿನಿಂದ ಧಾರ್ಮಿಕ ಮತಪ್ರವಚನ

Update: 2017-02-24 18:42 GMT

ಬಂಟ್ವಾಳ, ಫೆ.24: ಅರಳ ಕಲ್ಲಗುಡ್ಡೆಯ ಹಿದಾಯತುಲ್ ಇಸ್ಲಾಮ್ ಜುಮಾ ಮಸೀದಿಗೊಳಪಟ್ಟ ನೂತನ ಮದ್ರಸ ಕಟ್ಟಡದ ಉದ್ಘಾಟನೆ ಹಾಗೂ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ ಫೆ.25, 26ರಂದು ನಡೆಯಲಿದೆ. ಫೆ.25ರಂದು ಕೇರಳ ವಯನಾಡ್‌ನ ಅಬ್ದುಲ್ ಅಝೀಝ್ ಫೈಝಿ ಧಾರ್ಮಿಕ ಪ್ರವಚನಗೈಯಲಿದ್ದು, ಬಿತ್ತುಪಾದೆ ಜುಮಾ ಮಸೀದಿಯ ಖತೀಬ್ ಸೈಯದ್ ಸಿರಾಜುದ್ದೀನ್ ಪೂಕುಂಞಿ ಫೈಝಿ ತಂಙಳ್ ದುವಾಶೀರ್ವಚನಗೈಯಲಿದ್ದಾರೆ. ಫೆ.26ರಂದು ನೂತನ ಮದ್ರಸ ಕಟ್ಟಡವನ್ನು ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುವಾಶೀರ್ವಚನಗೈಯಲಿದ್ದಾರೆ. ಸ್ಥಳೀಯ ಮಸೀದಿಯ ಅಧ್ಯಕ್ಷ ಅಬ್ದುಲ್ ಕರೀಂ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News