ಬಂದ್ ನಡುವೆಯೂ ನೆಹರೂ ಮೈದಾನದಲ್ಲಿ ಸೇರಿದ ಸಾವಿರಾರು ಮಂದಿ
Update: 2017-02-25 15:16 GMT
ಮಂಗಳೂರು, ಫೆ. 25: ಸಿಪಿಎಂ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಸೌಹಾರ್ದ ರ್ಯಾಲಿ ಮತ್ತು ಸಮಾವೇಶದಲ್ಲಿ ಬಂದ್ ನಡುವೆಯೂ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಮಧ್ಯಾಹ್ನ 3:15ಕ್ಕೆ ಜ್ಯೋತಿ ವೃತ್ತದಿಂದ ಹೊರಟ ರ್ಯಾಲಿಯಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾಲ್ನಡಿಯಲ್ಲಿ ಹೊರಟ ರ್ಯಾಲಿಯು ಜ್ಯೋತಿ ವೃತ್ತದಿಂದ ಹಂಪನಕಟ್ಟೆಯಾಗಿ ನೆಹರೂ ಮೈದಾನ ತಲುಪಿತು.
ರ್ಯಾಲಿಯುದ್ದಕ್ಕೂ ಸಂಘಪರಿವಾರದ ವಿರುದ್ಧ ಘೋಷಣೆಗಳು ಮೊಳಗಿದವು. ಬೆಳಗ್ಗೆಯಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿದ್ದರೂ ಜಿಲ್ಲೆಯ ವಿವಿಧ ಕಡೆಗಳಿಂದ ನಗರಕ್ಕೆ ಬರಲು ಜನರು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಯಿತು.