ಅವಮಾನಿಸಲು ಹೇಳಿಕೆ ನೀಡಿಲ್ಲ: ಸಚಿವ ಖಾದರ್
Update: 2017-02-25 16:29 GMT
ಮಂಗಳೂರು, ಫೆ. 25: ಯಾರನ್ನೂ ನೋವುಂಟು ಮಾಡಲು ಅಥವಾ ಅವಮಾನಿಸಲು ಹೇಳಿಕೆ ನೀಡಿಲ್ಲ ಎಂದು ಸಚಿವ ಖಾದರ್ ಸ್ಪಷ್ಟನೆ ನೀಡಿದ್ದಾರೆ.
ನಗರದ ಐಎಂಎ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನ ವಿರೋಧಿಗಳಿಗೆ ಚಪ್ಪಲಿಯಲ್ಲಿ ಹೊಡೆಯಬೇಕೆಂಬ ಹೇಳಿಕೆಯ ಬಗ್ಗೆ ಬಂದಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಹೇಳಿಕೆಯ ಹಿಂದೆ ಯಾರನ್ನೂ ಅವಮಾನಿಸುವ ಉದ್ದೇಶ ಹೊಂದಿಲ್ಲ. ಸಂವಿಧಾನಾತ್ಮಕವಾಗಿ ಆಯ್ಕೆಗೊಂಡ ಅನ್ಯ ರಾಜ್ಯದ ಮುಖ್ಯಮಂತ್ರಿಯೊಬ್ಬರು ಮಂಗಳೂರಿಗೆ ಭೇಟಿ ನೀಡುವಾಗ ಅವರನ್ನು ಅತಿಥಿಗಳಂತೆ ಸತ್ಕರಿಸುವ ಮತ್ತು ಗೌರವಿಸುವ ಕೆಲಸ ಆಗಬೇಕೆಂದು ಹೇಳಿದ್ದೇನೆ ಎಂದಿದ್ದಾರೆ.