ಕಡಬ: ಅಂಗಡಿ-ಮುಂಗಟ್ಟು ಬಂದ್; ಬಸ್ ಸಂಚಾರ ಎಂದಿನಂತೆ

Update: 2017-02-25 18:45 GMT

ಕಡಬ, ೆ.25. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿಯನ್ನು ನಿಷೇಸಿ ವಿಹಿಂಪ, ಬಜರಂಗದಳ ಸಂಘಟನೆಗಳು ಕರೆ ನೀಡಿದ್ದ ದ.ಕ. ಜಿಲ್ಲಾ ಬಂದ್‌ಗೆ ಕಡಬದಲ್ಲಿ ಬೆಂಬಲ ವ್ಯಕ್ತವಾಯಿತು.

ಕಡಬ ಹಾಗೂ ಮರ್ಧಾಳದ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ದ್ದರು. ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು. ಸರಕಾರಿ ಬಸ್‌ಗಳು, ಖಾಸಗಿ ವಾಹನಗಳು ಎಂದಿನಂತೆ ಓಡಾಡಿವೆಯಾದರೂ, ಜನಸಂಚಾರ ಕಡಿಮೆಯಾಗಿತ್ತು.

ಗ್ರಾಮೀಣ ಪ್ರದೇಶಗಳಾದ ನೆಟ್ಟಣ, ಸುಂಕದಕಟ್ಟೆ, ಕಲ್ಲುಗುಡ್ಡೆ, ಬಿಳಿನೆಲೆ, ಕುಂತೂರು, ಆಲಂಕಾರು ಸೇರಿದಂತೆ ಹಲವೆಡೆ ಅಂಗಡಿಗಳು ಎಂದಿನಂತೆ ತೆರೆದಿತ್ತು. ಭದ್ರತೆಗಾಗಿ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News