ಕೊಲ್ಲೂರು: ಹೊಳೆಗೆ ಹಾರಿ ಆತ್ಮಹತ್ಯೆ
Update: 2017-02-27 21:40 IST
ಕೊಲ್ಲೂರು, ಫೆ.27: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕರ್ಕ್ಕುಂಜೆ ಗ್ರಾಮದ ನೇರಳಕಟ್ಟೆ ಮೇಲ್ಬೈಲು ನಿವಾಸಿ ಹೆರಿಯ ಪೂಜಾರಿ ಎಂಬವರ ಮಗಳು ಸುಪ್ರೀತಾ (23) ಎಂಬಾಕೆ ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ಬೆಳಗ್ಗೆ ವಂಡ್ಸೆ ಗ್ರಾಮದ ಚಕ್ರ ನದಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.