×
Ad

ಮಂಗಳೂರು: 'ಸಮಸ್ತ' ಮುಶಾವರ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸನ್ಮಾನ

Update: 2017-02-28 20:03 IST

ಮಂಗಳೂರು, ಫೆ. 28: ಶಾಂತಿ ಹಾಗೂ ಪ್ರೀತಿ ಧರ್ಮದ ಮೂಲವಾಗಿದೆ ಎಂದು ಸಮಸ್ತ ಮುಶಾವರ ಅಧ್ಯಕ್ಷ ಶೈಖುನಾ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಳ್ ಹೇಳಿದರು.

 ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾ, ದ.ಕ. ಕರ್ನಾಟಕ ಮುಶಾವರ ಹಾಗೂ ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್‌ನ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ ಪುರಭವನದಲ್ಲಿ ನಡೆದ 'ಸಮಸ್ತ' ಕೇರಳ ಜಂ-ಇಯ್ಯತ್ತುಲ್ ಉಲಮಾ ಮುಶಾವರ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

 ಆಧ್ಯಾತ್ಮಿಕತೆಯ ಭದ್ರ ಬುನಾದಿಯ ಮೇಲೆ ಕಟ್ಟಿದ ಧಾರ್ಮಿಕ ಉಲಮಾ ಸಂಘಟನೆಯಾದ ಸಮಸ್ತ ಸಂಘಟನೆಯು 95 ವರ್ಷಗಳಲ್ಲಿ ನಿಷ್ಕಳಂಕ ಮತ್ತು ನಿಸ್ವಾರ್ಥ ನಾಯಕರು ಮುತುವರ್ಜಿಯಿಂದ ನಾಯಕತ್ವ ನೀಡಿರುವುದೇ ಆ ಸಂಘಟನೆಯ ಯಶಸ್ಸಿನ ಮೂಲವಾಗಿದೆ. ಈ ಉಲಮಾಗಳ ಬದುಕನ್ನು ಮಾದರಿಯಾಗಿಟ್ಟು ಪ್ರತಿಯೊಬ್ಬರೂ ನಿಸ್ವಾರ್ಥದಿಂದ ಬಾಳಿ ಸಮುದಾಯದ ಅಭಿವೃದ್ಧಿಗೆ ಪಣತೊಡಬೇಕು ಎಂದು ಶೈಖುನಾ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಳ್ ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೂಡಿಗೆರೆ ಖಾಝಿ ಎಂ.ಎ.ಖಾಸಿಂ ಮುಸ್ಲಿಯಾರ್, ಇಂದಿನ ಕಲುಷಿತ ವಾತಾವರಣದಲ್ಲಿ ಪರಂಪರಾಗತವಾಗಿ ಬಂದ ಸುನ್ನಿ ತತ್ವಾದರ್ಶಕ್ಕೆ ಭಂಗ ಬಾರದಂತೆ ಕಾಯ್ದುಕೊಂಡ ಕೀರ್ತಿ ಸಮಸ್ತ ಸಂಘಟನೆಗೆ ಸಲ್ಲುತ್ತದೆ ಎಂದರು.

ಸಮಸ್ತ ಕೇರಳ ಮುಶಾವರದ ಅಧ್ಯಕ್ಷ ಶೈಖುನಾ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಳ್ ಹಾಗೂ ಉಪಾಧ್ಯಕ್ಷ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
 ಸಮಸ್ತ ದ.ಕ. ಜಿಲ್ಲಾ ಮುಶಾವರ ಅಧ್ಯಕ್ಷ ಶೈಖುನಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.

  ದ.ಕ. ಜಿಲ್ಲಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನ್ೀ ಹಾಜಿ, ಸಮಸ್ತ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಶೈಖುನಾ ಖಾಝಿ ಎಂ.ಎ. ಖಾಸಿಂ ಮುಸ್ಲಿಯಾರ್, ಕಾರ್ಯಕಾರಿ ಸದಸ್ಯ ಪಿಣಂಗೋಡು ಅಬೂಬಕರ್, ಸಮಸ್ತ ದ.ಕ. ಜಿಲ್ಲಾ ಉಪಾಧ್ಯಕ್ಷ ಶೈಖುನಾ ಖಾಝಿ ವಿ.ಕೆ. ಅಬೂಬಕರ್ ಮುಸ್ಲಿಯಾರ್, ಸ್ವಾಗತ ಸಮಿತಿಯ ಸಂಚಾಲಕ ಜಿ.ಎಂ. ಶಾಹುಲ್ ಹಮೀದ್ ಹಾಜಿ ಮೆಟ್ರೋ, ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ದ.ಕ. ಜಿಲ್ಲಾಧ್ಯಕ್ಷ ಕೆ.ಎಲ್. ಉಮಾರ್ ದಾರಿಮಿ ಪಟ್ಟೋರಿ, ಸಮಸ್ತ ಮದ್ರಸ ಮ್ಯಾನೇಜ್‌ಮೆಂಟ್ ದ.ಕ.ಜಿಲ್ಲಾಧ್ಯಕ್ಷ ಐ. ಮೊಯ್ದಿನಬ್ಬ ಹಾಜಿ, ಪ್ರಧಾನ ಕಾರ್ಯದರ್ಶಿ ಹಾಜಿ ರಫೀಕ್ ಕೊಡಾಜೆ, ಎಸ್‌ವೈಎಸ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ಲತ್ೀ ಮದರ್ ಇಂಡಿಯಾ, ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಇಸಾಕ್ ೈಝಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಮದ್ರಸ ಮ್ಯಾನೇಜ್‌ಮೆಂಟ್‌ನ ಕಾರ್ಯನಿರ್ವಾಹಕ ಕಾರ್ಯದರ್ಶಿ ಅಬ್ದುಲ್ ಹಕೀಂ ಪರ್ತಿಪಾಡಿ, ಮದ್ರಸ ಮ್ಯಾನೇಜ್‌ಮೆಂಟ್‌ನ ಮಂಗಳೂರು ಘಟಕ ಅಧ್ಯಕ್ಷ ರಿಯಾಝ್ ಬಂದರ್, ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಅಬೂಬಕರ್ ಹಾಜಿ ಕಲ್ಲಡ್ಕ, ಉಸ್ಮಾನ್ ಹಾಜಿ ಏರ್ ಇಂಡಿಯಾ, ಅಬ್ದುಲ್ ಖಾದರ್ ಹಾಜಿ ಕಡಬ, ಇಬ್ರಾಹೀಂ ಬಾಖವಿ ಕೆ.ಸಿ. ರೋಡ್, ಮುಸ್ತಾ ಹಾಜಿ ಕೆಂಪಿ, ರಶೀದ್ ಹಾಜಿ ಪುತ್ತೂರು, ಅಬ್ದುರ್ರಹ್ಮಾನ್ ಆಝಾದ್, ಸಜಿಪ ಅಬ್ಬಾಸ್ ಹಾಜಿ, ಕರಾವಳಿ ತಂಳ್, ಉಸ್ಮಾನ್ ೈಝಿ ತೋಡಾರ್, ಜಿಫ್ರಿ ತಂಳ್ ಆತೂರು, ಅಬ್ಬಾಸ್ ಹಾಜಿ ಮಜಲ್, ಅಝೀಝ್ ದಾರಿಮಿ ಚೊಕ್ಕಬೆಟ್ಟು, ಎಸ್.ಬಿ. ಮುಹಮ್ಮದ್ ದಾರಿಮಿ, ಜಿ. ಸುಲೈಮಾನ್ ಕಲ್ಲಡ್ಕ, ಇಕ್ಬಾಲ್ ಅಹ್ಮದ್ ಮುಲ್ಕಿ, ಬಾಷಾ ತಂಳ್ ಬಂದರ್, ಶರ್ೀ ಪೈಝಿ ಕಡಬ ಮತ್ತಿತರರು ಉಪಸ್ಥಿತರಿದ್ದರು.
ಸಮಸ್ತ ದ.ಕ. ಮುಶಾವರ ಪ್ರಧಾನ ಕಾರ್ಯದರ್ಶಿ ಅಲ್‌ಹಾಜ್ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಸ್ವಾಗತಿಸಿದರು. ಕೆ.ಎಂ.ಎ. ಕೊಡಂಗಾಯಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News