ಉಡುಪಿ: ಮಾ.4-10ರವರೆಗೆ 'ರಂಗಹಬ್ಬ-5' ನಾಟಕೋತ್ಸವ
ಉಡುಪಿ, ಫೆ.28: ಸುಮನಸಾ ಕೊಡವೂರು ವತಿಯಿಂದ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಸಂಸ್ಕೃತಿನಿರ್ದೇಶನಾಲಯ ನವದೆಹಲಿ, ಪೇಜಾವರ ಅಧೋಕ್ಷಜ ಮಠದ ಸಹಯೋಗದೊಂದಿಗೆ 'ರಂಗಹಬ್ಬ- 5' ನಾಟಕೋತ್ಸವವನ್ನು ಮಾ.4ರಿಂದ 10ರವರೆಗೆ ಸಂಜೆ 6:30ಕ್ಕೆ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಮಾ.4ರಂದು ರಂಗಹಬ್ಬವನ್ನು ನಾಡೋಜ ಜಿ.ಶಂಕರ್ ಉದ್ಘಾಟಿಸಲಿರು ವರು. ಅಧ್ಯಕ್ಷತೆಯನ್ನು ಸಚಿವ ಪ್ರಮೋದ್ ಮಧ್ವರಾಜ್ ವಹಿಸಲಿರುವರು. 10ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ವಹಿಸಲಿದ್ದಾರೆ.
ನಾಟಕೋತ್ಸವಕ್ಕೆ ಸುಮಾರು 7ಲಕ್ಷ ರೂ. ಖರ್ಚು ಅಂದಾಜಿಸಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಎಂ.ಎಸ್.ಭಟ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಾ.4ರಂದು ನಿರಂತರ ಫೌಂಡೇಶನ್ ಮೈಸೂರು ತಂಡದಿಂದ ಸುಗುಣ ಎಂ.ಎಂ. ನಿರ್ದೇಶನದ 'ರಸ್ತೆ ನಕ್ಷತ್ರ', 5ರಂದು ರಂಗಮಂಟಪ ಬೆಂಗಳೂರು ತಂಡದಿಂದ ಪ್ರಕಾಶ್ ಪಿ.ಶೆಟ್ಟಿ ನಿರ್ದೇಶನದ 'ಮಲ್ಲಿಗೆ', 6ರಂದು ರಸರಂಗ ಕದ್ರಿಕಟ್ಟು ಕೋಟ ತಂಡದಿಂದ ಗುಂಡ್ಮಿ ರಾಮಚಂದ್ರ ಐತಾಳ್ ನಿರ್ದೇಶನದ 'ಕಲೆಯ ಕೊಲೆ', 7ರಂದು ಸುಮನಸಾ ಕೊಡವೂರು ತಂಡದಿಂದ ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದ ಯಕ್ಷನಾಟಕ 'ಗೀತೋಪದೇಶ', 8ರಂದು ರಂಗಾಯಣ ಧಾರವಾಡ ತಂಡದಿಂದ ಚಿದಂಬರರಾವ್ ಜಂಬೆ ನಿರ್ದೇ ಶನದ 'ಚಕಾವ್ ಟು ಶಾಂಪೇನ್', 9ರಂದು ಭಾಸ ಕವಿ ನಿರ್ದೇಶನದ 'ಸ್ವಪ್ನ ವಾಸವದತ್ತ', 10ರಂದು ಸುಮನಸಾ ಕೊಡವೂರು ತಂಡದಿಂದ ವಿದ್ದು ಉಚ್ಚಿಲ್ ನಿರ್ದೇಶನದ 'ಮುದ್ರಾರಾಕ್ಷಸ' ನಾಟಕ ಪ್ರದರ್ಶನಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷ ಗಣೇಶ್ ರಾವ್ ಎಲ್ಲೂರು ಉಪಸ್ಥಿತರಿದ್ದರು.