×
Ad

ಗ್ರೈಂಡರ್‌ಗೆ ದಾವಣಿ ಸಿಲುಕಿ ಗೃಹಿಣಿ ಸಾವು

Update: 2017-03-02 17:58 IST

ಕಾಸರಗೋಡು, ಮಾ..2: ಗ್ರೈಂಡರ್‌ಗೆ  ದಾವಣಿ ಸಿಲುಕಿ ಗೃಹಿಣಿ ಮೃತಪಟ್ಟ ದಾರುಣ ಘಟನೆ ಕುಂಬಳೆ ಸಮೀಪದ ಶಿರಿಯಾ ದಲ್ಲಿ ಬುಧವಾರ ರಾತ್ರಿ ನಡೆದಿದೆ.

ಮೃತಪಟ್ಟವರನ್ನು  ಆಯಿಷತ್ ಮುನೈಫಾ ( 22) ಎಂದು ಗುರುತಿಸಲಾಗಿದೆ.

ಮುನೈಫಾ   ಗ್ರೈಂಡರ್‌ನಲ್ಲಿ ಅಕ್ಕಿ  ಕಡೆಯುತ್ತಿದ್ದಾಗ ಗ್ರೈಂಡರ್‌ಗೆ  ದಾವಣಿ ಸಿಲುಕಿ ನಂತರ ಅದು ಕುತ್ತಿಗೆಗೆ ಬಿಗಿದು ಈ ಘಟನೆ ನಡೆದಿದೆ.

ಕೂಡಲೇ ಮನೆಯವರು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ . ಒಂದೂವರೆ ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು . ಪತಿ ಒಂದು ತಿಂಗಳ ಹಿಂದೆ  ಊರಿಗೆ ಬಂದಿದ್ದರು.

ಕುಂಬಳೆ ಪೊಲೀಸರು ಮೃತದೇಹದ ಮಹಜರು ನಡೆಸಿದ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು  ಜನರಲ್ ಆಸ್ಪತ್ರೆಯಲ್ಲಿ  ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News