×
Ad

ಕಡಂದಲೆ: ಯುವಕ ಅಪಘಾತಕ್ಕೆ ಬಲಿ

Update: 2017-03-02 23:08 IST

ಮೂಡುಬಿದಿರೆ, ಮಾ.2: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಎಂಬಲ್ಲಿನ ಯುವಕನೋರ್ವ ವಾರದ ಹಿಂದೆ ನಡೆದ ಅಪಘಾತಕ್ಕೆ ಬಲಿಯಾಗಿದ್ದಾನೆ.

ಕಡಂದಲೆ ಹೊಸಂಗಡಿ ನಿವಾಸಿ ಪ್ರಭಾಕರ ಶೆಟ್ಟಿಯವರ ಪುತ್ರ ಪ್ರಸನ್ನ ಶೆಟ್ಟಿ(23) ಮೃತ ಯುವಕ.

ವಾರದ ಹಿಂದೆ ಈತ ತನ್ನ ಮೂವರು ಸಹೋದ್ಯೋಗಿಗಳೊಂದಿಗೆ ಸುರತ್ಕಲ್‌ನಲ್ಲಿ ರಸ್ತೆಬದಿ ನಿಂತಿದ್ದಾಗ ಅತೀ ವೇಗವಾಗಿ ಬಂದ ಕಾರೊಂದು ನಾಲ್ವರಿಗೂ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯಲ್ಲಿ ಪ್ರಸನ್ನ ತೀವ್ರವಾಗಿ ಗಾಯಗೊಂಡಿದ್ದು, ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇತರ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News