​ ಮಾ.5: ಕುದ್ರೋಳಿಯಲ್ಲಿ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮ

Update: 2017-03-04 07:42 GMT

ಮಂಗಳೂರು, ಮಾ.4: ಮುಹಿಮ್ಮಾತುಲ್ ಮುಸ್ಲಿಮೀನ್ ಇದರ ಕುದ್ರೋಳಿ ಘಟಕ ಇದರ ವತಿಯಿಂದ ಮಾ.5ರಂದು ಮಗ್ರಿಬ್ ನಮಾಝ್ ಬಳಿಕ ಕುದ್ರೋಳಿ ಎ-1ಬಾಗ್‌ನಲ್ಲಿ ಸುನ್ನಿ ಅಶಯ ವಿಷದೀಕರಣ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಂಗಮ ನಡೆಯಲಿದೆ.

ಸಭೆಯ ಅಧ್ಯಕ್ಷತೆಯನ್ನು ನಡುಪಳ್ಳಿ ಮಸೀದಿಯ ಅಧ್ಯಕ್ಷ ಹಾಜಿ ಅಬೂಬಕರ್‌ವಹಿಸುವರು. ಸ್ವದಕತುಲ್ಲಾ ಫೈಝಿ ಉದ್ಘಾಟಿಸುವರು. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಅನುಸ್ಮರಣಾ ಭಾಷಣ ಮಾಡುವರು. ಸುನ್ನಿ ಅಶಯ ವಿಷದೀಕರಣ ಭಾಷಣ ಮುಸ್ತಫಾ ಅಶ್ರಫಿ ಕಕ್ಕುಪಡಿ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಇರ್ಷಾದ್ ಫೈಝಿ, ಮುಹಮ್ಮದ್ ಬಾಖವಿ, ಮುಹಮ್ಮದ್ ರಫೀಕ್ ಮದನಿ, ಹಾಜಿ ಅಬ್ದುಲ್ ಅಝೀಝ್ ಮೊದಲಾದವರು ಭಾಗವಹಿಸಲ್ಲಿದ್ದಾರೆ ಎಂದು ಸ್ವಾಗತ ಸಮಿತಿಯ ಕನ್ವೀನರ್ ದರ್ವೇಶ್ ಹುಸೈನ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News