ಮೂಡುಬಿದಿರೆ: ಅಮ್ಮನವರ ಬಸದಿಯಲ್ಲಿ ಮಹಾರಥೋತ್ಸವ
Update: 2017-03-05 21:45 IST
ಮೂಡುಬಿದಿರೆ, ಮಾ.5: ಶ್ರೀ ಹಿರೇ ಅಮ್ಮನವರ ಬಸದಿಯ ಶ್ರೀಶಾಂತಿನಾಥ ಸ್ವಾಮಿ ಮತ್ತು ಪದ್ಮಾವತೀ ದೇವಿಯ ವಾರ್ಷಿಕ ಉತ್ಸವ ಹಾಗೂ ಮಹಾರಾಥೋತ್ಸವ ಶನಿವಾರ ರಾತ್ರಿ ನಡೆಯಿತು.
ತ್ರಿಭುವನ್ ಜೈನ್ ಝಂಝಂ ಪತಕ್ ಬ್ಯಾಂಡ್, ಚೆಂಡೆ, ವಾದ್ಯ ಮೇಳಯೊಂದಿಗೆ ಮೆರವಣಿಗೆ ನಡೆಯಿತು. ಬಸದಿಯ ಆನುವಂಶಿಕ ಮೊಕ್ತೇಸರ ಭಾಸ್ಕರ್ ಎಸ್.ಕಟ್ಟೆಮಾರು, ರಾಜವರ್ಮ ಬೈಲಂಗಡಿ, ಕೀರ್ತಿವರ್ಮ ಸಹಿತ ಜೈನ ಮುಖಂಡರು, ಬಸದಿಗಳ ಮೊಕ್ತೇಸರರಾದ ಪಟ್ನ ಸುದೇಶ್, ಆನಡ್ಕ ದಿನೇಶ್ ಉಪಸ್ಥಿತರಿದ್ದರು.