ಬಾಲಮಂದಿರದಿಂದ ಏಳು ಮಕ್ಕಳು ಪರಾರಿ

Update: 2017-03-05 18:50 GMT

ಮಂಗಳೂರು, ಮಾ.5: ಬೊಂದೇಲ್ ಕೃಷ್ಣನಗರದಲ್ಲಿರುವ ಬಾಲ ಮಂದಿರದಿಂದ ಏಳು ಮಕ್ಕಳು ತಪ್ಪಿಸಿಕೊಂಡಿರುವ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ. ಈ ಪೈಕಿ ಮೂವರು ಮಕ್ಕಳನ್ನು ಪತ್ತೆ ಮಾಡಲಾಗಿದೆ.

ಬಾಲ ಮಂದಿರದಲ್ಲಿದ್ದ ಮಾರುತಿ (12), ಚೇತನ್ (13), ಜೀವನ್ (13), ಅರುಣ್ (17), ಮುಖೇಶ್ (17), ರಾಜು (16), ನವೀನ್ (13) ಎಂಬವರು ಇಂದು ಮಧ್ಯಾಹ್ನ ಸುಮಾರು 2:30ಕ್ಕೆ ಕಾಂಪೌಂಡ್ ಹಾರಿ ತಪ್ಪಿಸಿಕೊಂಡಿದ್ದಾರೆ.

ಈ ಪೈಕಿ ನವೀನ್, ಅರುಣ್ ಮತ್ತು ಮಾರುತಿ ಎಂಬವರನ್ನು ಪತ್ತೆ ಹಚ್ಚಿ ಬಾಲ ಮಂದಿರಕ್ಕೆ ಕಳುಹಿಸಲಾಗಿದೆ ಎಂದು ಕಾವೂರು ಪೊಲೀಸರು ತಿಳಿಸಿದ್ದಾರೆ. ತಪ್ಪಿಸಿಕೊಂಡಿರುವ ಮಕ್ಕಳು ಮಡಿಕೇರಿ, ಕುಂದಾಪುರ, ಪಂಜಿಮೊಗರು ಮತ್ತು ಕೂಳೂರಿನವರೆಂದು ಹೇಳಲಾಗಿದೆ.

ಕಾವೂರು ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News