ತೊಕ್ಕೊಟ್ಟು: ಅಂಗಡಿ ಬೆಂಕಿಗಾಹುತಿ
ಮಂಗಳೂರು, ಮಾ.7: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಜಂಕ್ಷನ್ ಬಳಿ ಬಟ್ಟೆ ಹಾಗೂ ಅಡುಗೆ ಸಾಮಗ್ರಿಗಳ ಮಳಿಗೆಯೊಂದು ಬೆಂಕಿ ಆಕಸ್ಮಿಕಕ್ಕೊಳಗಾಗಿ ಭಸ್ಮಗೊಂಡ ಘಟನೆ ಮಂಗಳವಾರ ರಾತ್ರಿ 10:30ರ ಸುಮಾರಿಗೆ ನಡೆದಿದೆ.
ಇಲ್ಲಿ ಕಾರ್ಯಾಚರಿಸುತ್ತಿದ್ದ ಬಾಂಬೆ ಬಝಾರ್ ಎಂಬ ಬೃಹತ್ ಮಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅದರೊಳಗಿದ್ದ ಬಟ್ಟೆಬರೆಗಳು ಸಹಿತ ಸೊತ್ತುಗಳೆಲ್ಲ ಸುಟ್ಟು ಕರಕಲಾಗಿವೆ. ಬಳಿಕ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದರು. ಇಂದು ಸ್ವಚ್ಛಶಕ್ತಿ ಸಪ್ತಾಹ ಸಮಾರೋಪ ಮಂಗಳೂರು, ಮಾ.7: ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸ್ವಚ್ಛಶಕ್ತಿ ಸಪ್ತಾಹ ಸಮಾರೋಪ ಸಮಾರಂಭವು ಮಾ.8ರಂದು ಅಪರಾಹ್ನ 3ಕ್ಕೆೆ ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ನಡೆಯಲಿದೆ. ದ.ಕ. ಜಿಪಂ, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ನೆರವು ಘಟಕ, ಪುತ್ತೂರು ತಾಪಂ, ಒಳಮೊಗ್ರು ಗ್ರಾಪಂ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವ ನೀಡಲಿದೆ ಎಂದು ಪ್ರಕಟನೆ ತಿಳಿಸಿದೆ.