ಮಂಗಳೂರು, ಉಡುಪಿಯ ಹಲವೆಡೆ ಎಸಿಬಿ ದಾಳಿ

Update: 2017-03-09 06:26 GMT

ಮಂಗಳೂರು, ಮಾ.9: ಉಡುಪಿ ಹಾಗೂ ಮಂಗಳೂರಿನ ಹಲವೆಡೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದೆ.

ಉಡುಪಿ ತಾಲೂಕಿನ ಕುಂದಾಪುರದ ಕಂಬದಕೋಣೆಯಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯ ಕೊಲ್ಲೂರು ಅವರ ಮನೆ, ಕಾಂಪ್ಲೆಕ್ಸ್, ಮೊದಲಾದ ಕಡೆ ಎಸಿಬಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಎಸಿಬಿ ಅಧಿಕಾರಿಗಳಾದ ಡಿವೈಎಸ್ಪಿ ಸುಧೀರ್ ಹೆಗ್ಡೆ , ಇನ್ ಸ್ಪೆಕ್ಟರ್ ಯೋಗಿಶ್ ಕುಮಾರ್ , ಇನ್ ಸ್ಪೆಕ್ಟರ್ ಸತೀಶ್, ಇನ್ ಸ್ಪೆಕ್ಟರ್ ದಿನಕರ್ ಶೆಟ್ಟಿ ಕಾರ್ಯಾಚರಣೆಯಲ್ಲಿ ಇದ್ದರು.

ಅಲ್ಲದೆ ಮಂಗಳೂರಿನ ಹಲವೆಡೆ ಎಸಿಬಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News