×
Ad

​ಉಡುಪಿ: ವಿವಿಧೆಡೆ ವಿಶ್ವ ಮಹಿಳಾ ದಿನಾಚರಣೆ

Update: 2017-03-10 22:49 IST

ಉಡುಪಿ, ಮಾ.10: ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಮಹಿಳಾ ವೈದ್ಯರ ವೇದಿಕೆ ಱಗಾರ್ಗಿೞ ಹಾಗೂ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಅಂತಾರಾಷ್ಟ್ರಿಯ ಮಹಿಳಾ ದಿನಾ ಚರಣೆಯ ಪ್ರಯುಕ್ತ ಗೃಹಿಣಿಯರಿಗಾಗಿ ಮಾಹಿತಿ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮವನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ ಶರ್ಮಾ ಉದ್ಘಾಟಿಸಿದರು. ಕಾಲೇಜಿನ ಸಂಹಿತಾ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ವಿದ್ಯಾಲಕ್ಷ್ಮಿ ಸ್ವಾಗತಿಸಿದರು. ಡಾ.ಲಿಖಿತಾ ವೇದಿಕೆಯ ವಾರ್ಷಿಕ ವರದಿ ವಾಚಿಸಿದರು. ಪತಂಜಲಿ ರೈತ ಸೇವಾ ಕೇಂದ್ರದ ವಿತರಕ ಮಹೇಶ್ ಶೆಣೈ ತೋಟಗಾರಿಕೆಯ ಬಗ್ಗೆ ವಿಶೇಷ ಮಾಹಿತಿ ನೀಡಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಕಾಯ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಜಿ.ಎಸ್.ಆಚಾರ್ಯ ವಹಿಸಿದ್ದರು. ಡಾ.ಚೇತನಾ ವಂದಿಸಿದರು. ಡಾ.ಗಾಯತ್ರಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಛಾಯಾಗ್ರಾಹಕಿಗೆ ಸನ್ಮಾನ:

ಉಡುಪಿ ಛಾಯಾಗ್ರಾಹಕರ ಸಂಘದ ಉಡುಪಿ ವಲಯದ ವತಿಯಿಂದ ವಿಶ್ವಮಹಿಳಾ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ಪ್ರತಿಭಾವಂತ ಮಹಿಳಾ ಛಾಯಾಗ್ರಾಹಕಿಯರಾದ ಲಕ್ಷ್ಮಿ ಮತ್ತು ವಿಮಲಾ ಅವರನ್ನು ಸನ್ಮಾನಿಸಲಾಯಿತು.

 ಉಡುಪಿ ಚೇತನಾ ಸ್ಟುಡಿಯೋದ ರಾಘವ ಪದ್ಮಶಾಲಿ ಅಧ್ಯಕ್ಷತೆ ವಹಿಸಿ ದ್ದರು. ಉಡುಪಿ ವಲಯದ ಅಧ್ಯಕ್ಷ ವಾಮನ್ ಪಡುಕೆರೆ, ಗೌರವಾಧ್ಯಕ್ಷ ರಂಜನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, ಪತ್ರಕರ್ತ ಸಂಘದ ಅಧ್ಯಕ್ಷ ಜಯಕರ ಸುವರ್ಣ, ಶಿವ ಕೆ.ಅಮೀನ್, ಪೂರ್ಣಿಮಾ ಆತ್ರಾಡಿ ಮೊದಲಾದವರು ಉಪಸ್ಥಿತರಿದ್ದರು.

ಮೆಸ್ಕಾಂ ಉಡುಪಿ ವಲಯ:

ಮೆಸ್ಕಾಂ ಉಡುಪಿ ವೃತ್ತ ಕಛೇರಿ ವ್ಯಾಪ್ತಿಯ ಕಾರ್ಕಳ, ಬೈಂದೂರು, ಉಡುಪಿ ವಲಯದ ಮಹಿಳಾ ಸಿಬ್ಬಂದಿಗಳ ವತಿ ಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಉಡುಪಿಯ ಸ್ವದೇಶಿ ಹೋಟೆಲ್ ಸಭಾಂಗಣ ದಲ್ಲಿ ಜರಗಿತು.
 ಉಡುಪಿಯ ಟಿ.ಎಂ.ಎ.ಆಸ್ಪತ್ರೆಯ ಅಧೀಕ್ಷಕಿ ಡಾ.ಪಾರ್ವತಿ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭಾರತಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜ್ಯೋತ್ಸ್ನಾ ಪ್ರಭು, ಹಣಕಾಸು ವಿಭಾಗದ ಹಿರಿಯ ಸಹಾಯಕಿ ಚಂದ್ರಿಕಾ, ಹಿರಿಯ ಸಹಾಯಕಿ ರುಕ್ಮಿಣಿ ಉಪಸ್ಥಿತರಿದ್ದರು.

ಬಂಟಕಲ್ ಕಾಲೇಜು:

ಬಂಟಕಲ್ಲಿನ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವರೆಡ್‌ಕ್ರಾಸ್ ವಿಭಾಗ ಹಾಗೂ ರೋಟರ್ಯಾಕ್ಟ್ ಘಟಕಗಳ ಜಂಟಿ ಆಶ್ರಯದಲ್ಲಿ ವಿಶ್ವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕಾಲೇಜಿನ ಆವರಣದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಉಡುಪಿ ತಾಪಂ ಸದಸ್ಯೆ ಗೀತಾ ವಾಗ್ಲೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಸಿವಿಲ್ ಇಂಜಿನಿಯರಿಂಗ್ ವಿಬಾಗದ ಮುಖ್ಯಸ್ಥ ಡಾ.ರಾಧೇಶ್ಯಾಮ್ ವಹಿಸಿದ್ದರು.

 ರಾಷ್ರೀಯ ಸೇವಾಯೋಜನೆಯ ಸಂಯೋಜಕ ನಾಗರಾಜ ರಾವ್ ಸ್ವಾಗತಿಸಿದರು. ಆಕಾಂಕ್ಷ ಮಹಿಳಾ ದಿನದ ಪ್ರಾಮುಖ್ಯತೆಯನ್ನು ವಿವರಿಸಿ ದರು. ಪವಿತ್ರ ವಂದಿಸಿದರು. ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News