ವೃಕ್ಷ ಬಿಸಿನೆಸ್ ಸೊಲ್ಯೂಶನ್ಸ್ನಿಂದ ವಂಚನೆ: ನ್ಯಾಯಕ್ಕೆ ಆಗ್ರಹ
ಮಂಗಳೂರು, ಮಾ.11: ಹಣಕಾಸಿನ ವಿಚಾರದಲ್ಲಿ ಹಲವು ಏಜೆಂಟರಿಗೆ ವಂಚನೆ ಎಸಗಿರುವ ವೃಕ್ಷ ಬಿಸಿನೆಸ್ ಸೊಲ್ಯೂಶನ್ಸ್ನಿಂದ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಹಾಗಾಗಿ ತಕ್ಷಣ ಎಚ್ಚೆತ್ತುಕೊಂಡು ಪರಿಹಾರ ನೀಡಬೇಕು ಎಂದು ಸಂತ್ರಸ್ತ ಏಜೆಂಟರು ಆಗ್ರಹಿಸಿದ್ದಾರೆ.
ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಜೆಂಟ್ ೌಝಿಯಾ, ಮನೆ ಮನೆಗೆ ಹೋಗಿ ಹಣ ಸಂಗ್ರಹಿಸಿ ಸಂಸ್ಥೆಗೆ ಕಟ್ಟಲಾಗಿದೆ. ಇದೀಗ ಸಂಸ್ಥೆಯ ಮೋಸದಿಂದಾಗಿ ಹಣ ಕಳೆದುಕೊಂಡವರಿಗೆ ಏಜೆಂಟರು ಉತ್ತರ ಕೊಡಬೇಕಾಗಿದೆ ಎಂದರು.
ಏಜೆಂಟರಾದ ರಾಮ ಎಸ್. ಬಂಗೇರ ಮಾತನಾಡಿ, ಕಂಪೆನಿಯವರು ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ್ದಾರೆ. ನಮ್ಮ ನಿರಂತರ ಹೋರಾಟದ ಬಳಿಕ ಮಾಲಕರನ್ನು ಬಂಧಿಸಿದ್ದರೂ ಇದೀಗ ಬಿಡುಗಡೆಗೊಳಿಸಲಾಗಿದೆ. ‘ಹಣ ಕೊಡುವುದಿಲ್ಲ. ಏನು ಮಾಡುತ್ತೀರೋ ಮಾಡಿ’ ಎಂದು ಮಾಲಕರು ಹೆದರಿಸು ತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆದಿದ್ದರೂ, ಇನ್ನೂ ಕೂಡಾ ಸರಕಾರಕ್ಕೆ ವರದಿ ಸಲ್ಲಿಸಿಲ್ಲ. ಪರಿಹಾರಧನ ಸಿಗುವಲ್ಲಿವರೆಗೂ ಹೋರಾಟ ಮುಂದುವರಿಯಲಿದೆ ಎಂದು ಏಜೆಂಟರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಏಜೆಂಟರಾದ ಸಬೀನಾ, ಸುನೀತಾ ಮೊದಲಾದವರು ಉಪಸ್ಥಿತರಿದ್ದರು.