ವಾಣಿಜ್ಯ ತೆರಿಗೆ ನೌಕರರ ಸಂಘದ ಮಹಾಸಭೆ

Update: 2017-03-14 13:56 GMT

ಮಂಗಳೂರು, ಮಾ.14: ವಾಣಿಜ್ಯ ತೆರಿಗೆ ಇಲಾಖಾ ಸಿ ಮತ್ತು ಡಿ ದರ್ಜೆ ನೌಕರರ ಸಂಘದ 28ನೆ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಶಿಧರ ಎಂ. ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಕೊಟ್ಟಾರ ಚೌಕಿಯಲ್ಲಿರುವ ಸಂಘದ ಕಟ್ಟಡವು ನಾದುರಸ್ಥಿಯಲ್ಲಿದ್ದು, ಶೀಘ್ರವಾಗಿ ದುರಸ್ಥಿಗೊಳಿಸಿ ಸಂಘದ ಆದಾಯವನ್ನು ಹೆಚ್ಚಿಸಿ ಸದಸ್ಯರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ಆಶಯ ಹೊಂದಿದೆ ಎಂದು ಸಂಘದ ಅಧ್ಯಕ್ಷ ಶಶಿಧರ ಎಂ. ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಎಚ್. ಗಣೇಶ್ ರಾವ್ ವರದಿ ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News