ರಾಜಕೀಯ ಪಕ್ಷಗಳು ಧರ್ಮವಾಗಿ ಬಿಟ್ಟಿವೆ: ಕಲಾವಿದ ಕಾನಾಯಿ ಕುಂಞಿರಾಮನ್
Update: 2017-03-16 07:00 GMT
ಕೊಂಡೊಟ್ಟಿ, ಮಾರ್ಚ್ 16: ರಾಜಕೀಯ ಪಕ್ಷಗಳು ಧರ್ಮವಾಗಿ ಪರಿವರ್ತನೆಹೊಂದಿದೆ ಎಂದು ಕಲಾವಿದ ಕಾನಾಯಿ ಕುಂಞಿರಾಮನ್ ಹೇಳಿದ್ದಾರೆ. ಕರಿಪ್ಪೂರ್ ವಿಮಾನ ನಿಲ್ದಾಣದ ಅಂತಾರಾಷ್ಟ್ರೀಯ ಟರ್ಮಿನಲ್ ಸೆಕ್ಯುರಿಟಿ ಲಾಂಚ್ ಬಳಿ ಹೊಸ ಆರ್ಟ್ ಗ್ಯಾಲರಿಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ವಿಮಾನ ನಿಲ್ದಾಣ ನಿರ್ದೇಶಕ ಕೆ. ಜನಾರ್ದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿತ್ರಗಳು ಮಾರಾಟವಾಗಿ ಸಿಗುವ ಹಣದಲ್ಲಿ ಶೇ. 10ರಷ್ಟು ವಿಮಾನ ನಿಲ್ದಾಣದ ಪ್ರಾಧಿಕಾರಕ್ಕೆ ನೀಡಬೇಕಿದೆ.
ಛಾಯಾಚಿತ್ರಗಳು, ಕರಕೌಶಲ ವಸ್ತುಗಳನ್ನು ಕೂಡಾ ಆರ್ಟ್ಗ್ಯಾಲರಿಯಲ್ಲಿ ಮಾರಾಟಕ್ಕಿಡಬಹುದು. ಪೈಂಟಿಂಗ್ ಕರಕೌಶಲ ವಸ್ತುಗಳನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು. ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಕಲಾವಿದ ಮದನ್, ಜಿ.ಸ್ಮಿತಾ, ಗಾಯತ್ರಿ ಹಾಗೂ ವಿಮಾನ ನಿಲ್ದಾಣದ ನೌಕರರಿಂದ ಕಾರ್ಯಕ್ರಮ ನಡೆಯಿತು.