ಆಕ್ಷೇಪಕ್ಕೆ ಮಣಿದು ನೇಮೋತ್ಸವ ಹೆಸರಿನಲ್ಲಿ ಬದಲಾವಣೆ

Update: 2017-03-17 09:51 GMT

ಮಂಗಳೂರು, ಮಾ.17: ಚಿತ್ರಾಪುರ ಮಹಾಂಕಾಳಿ ದೈವಸ್ಥಾನದಲ್ಲಿ ಮಾ.18ರಂದು ಕೊರಗ ತನಿಯ ಹಾಗೂ ಏಳು ಕೊರಪೊಲು ಎಂಬ ಹೆಸರಿನಲ್ಲಿ ನಡೆಸಲು ಉದ್ದೇಶಿಸಿದ ನೇಮೋತ್ಸವಕ್ಕೆ ಕೊರಗ ಸಮುದಾಯದಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ದೈವಸ್ಥಾನವು ಕೊರಗ ತನಿಯ ಹಾಗೂ ಏಳು ಸೀಶಕ್ತಿ ಸ್ವರೂಪಿಣಿ ದೈವಗಳ ಹೆಸರಿನಲ್ಲಿ ನೇಮೋತ್ಸವ ನಡೆಸಲು ನಿರ್ಧರಿಸಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕೆ.ಕೆ.ಪೇಜಾವರ, ದೈವಸ್ಥಾನದಲ್ಲಿ ಈ ಮೊದಲು ಕೊರಪಲುಗಳ ನೇಮೋತ್ಸವ ನಡೆಸುವುದು ಎಂದು ತೀರ್ಮಾನ ಮಾಡಲಾಗಿತ್ತು. ಆದರೆ ಕೊರಪಲು ಎಂಬ ಪದ ಕೊರಗ ಜನಾಂಗದ ಸೀಯರಿಗೆ ಅವಮಾನವಾಗುವುದೆಂದು ಕೊರಗ ಸಮುದಾಯದವರು ತಿಳಿಸಿದ ಪರಿಣಾಮ ಈ ಪದ ಬಳಕೆಗೆ ನಮ್ಮ ಸಮಿತಿ ಕ್ಷಮೆ ಯಾಚಿಸುತ್ತದೆ. ಜತೆಗೆ ಕೊರಗ ತನಿಯ ಹಾಗೂ ಏಳು ಸೀ ಶಕ್ತಿ ಸ್ವರೂಪಿಣಿ ದೈವಗಳ ನೇಮೋತ್ಸವ ನಡೆಸಲಾಗುವುದು ಎಂದರು.

 ಅಂದು ಬೆಳಗ್ಗೆ ಭಂಡಾರ ಏರುವುದು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ 4ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಕೃಷ್ಣಾರ್ಜುನ ಕಾಳಗ ಯಕ್ಷಗಾನ ತಾಳಮದ್ದಳೆ ಹಾಗೂ ಸಂಜೆ 7ಕ್ಕೆ ನಾಗರಾಜ್ ಶೇಟ್ ಉಡುಪಿ ಬಳಗದಿಂದ ಭಕ್ತ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಗಂಟೆಗೆ ನೇಮೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗಣೇಶ್ ಹೊಸಬೆಟ್ಟು, ಪುರುಷೋತ್ತಮ ಚಿತ್ರಾಪುರ, ರಮೇಶ್ ಅಂಚನ್, ಲೋಕೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News