ಮಾ.19ರಂದು ಅಕ್ಕರೆಕೆರೆಯಲ್ಲಿ ಮೆಹಫಿಲೇ ತ್ವಯ್ಬ ಸಂಗಮ
Update: 2017-03-18 12:37 IST
ಉಳ್ಳಾಲ, ಮಾ.18: ಎಸ್ ವೈಎಸ್ ಅಕ್ಕರೆಕೆರೆ ಹಳೆಕೋಟೆ ಹಾಗೂ ಸೈಯದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ, ಉಳ್ಳಾಲ ಇದರ ಸಹಯೋಗದಲ್ಲಿ ಮೆಹಫಿಲೇ ತ್ವಯ್ಬ ಸಂಗಮ ಹಾಗೂ ಪ್ರಾರ್ಥನಾ ಸಂಗಮ ಕಾರ್ಯಕ್ರಮ ಮಾ.19ರಂದು ಸಂಜೆ 7 ಗಂಟೆಗೆ ಅಕ್ಕರೆಕೆರೆ ಅಬೂಬಕರ್ ಸಿದ್ದೀಕ್ ಮಸೀದಿ ಸಮೀಪದ ಲತೀಫ್ ಪ್ಯಾಲೇಸ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ನೇತೃತ್ವವನ್ನು ಎಸ್ ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಸೈಯದ್ ಜಲಾಲುದ್ದೀನ್ ತಂಙಳ್ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.