ಅಡ್ಡೂರು: ಶೈಖುನಾ ಅಲ್ ಹಾಜಿ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉಸ್ತಾದರಿಗೆ ಸನ್ಮಾನ ಕಾರ್ಯಕ್ರಮ

Update: 2017-03-18 13:47 GMT

ಮಂಗಳೂರು,ಮಾ.18: ಬದ್ರಿಯಾ ಜುಮ್ಮಾ ಮಸೀದಿ ಅಡ್ಡೂರು ಇದರ ಆಶ್ರಯದಲ್ಲಿ ಸಮಸ್ತ ಕೇರಳ ಜಂಮೀಯತುಲ್ ಉಲಮಾ ಉಪಾಧ್ಯಾಕ್ಷರಾಗಿ ಆಯ್ಕೆಯಾದ ಶೈಖುನಾ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉಸ್ತಾದರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ ಮಾ.17 ಶುಕ್ರವಾರ ಜುಮ್ಮಾ ನಮಾಝಿನ ನಂತರ ಅಲ್-ಮದ್ರಸತುಲ್ ಬದ್ರಿಯಾ ಇದರ ಸಭಾಂಗಣದಲ್ಲಿ ನಡೆಯಿತು.

 ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಅಡ್ಡೂರು ಅಧ್ಯಕ್ಷರಾದ ಟಿ.ಸೈಯದ್ ತೋಕೂರ್,ಖತೀಬ್ ಬಹು|ಕೆ.ಎಂ.ಮೊಹಮ್ಮದ್ ಶೆರೀಪ್ ಧಾರಿಮಿ,ಅಲ್ ಹಾಜಿ ಯುಸೂಪ್ ಮುಸ್ಲಿಯಾರ್,ಹಾಗೂ ಜಮಾಅತ್ ಕಮಿಟಿ ಸದಸ್ಯರು ಮತ್ತು ಜಮಾಅತ್ ಬಾಂಧವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News