ವಾಲ್ಪಾಡಿ : ದೈವ ನರ್ತಕ ಆತ್ಮಹತ್ಯೆ
Update: 2017-03-18 19:34 IST
ಮೂಡುಬಿದಿರೆ, ಮಾ.18: ವಾಲ್ಪಾಡಿ ಮಾಡದಂಗಡಿ ಬಳಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಇಲ್ಲಿನ ನಿವಾಸಿ ಮುದರ ಪರವ (58) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಕಿಟಕಿಗೆ ಶಾಲು ಬಳಸಿ ನೇಣುಹಾಕಿಕೊಂಡಿದ್ದಾರೆ. ಮುದರ ಅವರು ದೈವ ನರ್ತಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮನೆ ಮಂದಿ ಎಲ್ಲರೂ ಭೂತದ ಕೋಲವೊಂದಕ್ಕೆ ಹೋಗಿದ್ದರೂ ಮುದರ ಅವರು ಮಾತ್ರ ಮನೆಯಲ್ಲಿಯೇ ಇದ್ದಿದ್ದು, ಮನೆ ಮಂದಿ ವಾಪಾಸಾದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.