ಮನಪಾ ವಲಯ ಆಯುಕ್ತೆಯಾಗಿ ರೇಖಾ ಶೆಟ್ಟಿ ನೇಮಕ
Update: 2017-03-19 00:09 IST
ಮಂಗಳೂರು, ಮಾ.18: ಮಂಗಳೂರು ಮಹಾನಗರಪಾಲಿಕೆಯಲ್ಲಿ ವಲಯ ಆಯುಕ್ತರಾಗಿ ರೇಖಾ ಜೆ. ಶೆಟ್ಟಿ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇವರು ನಗರಪಾಲಿಕೆಯ ವಲಯ-1 ಸುರತ್ಕಲ್ ವಲಯದ ಉಸ್ತುವಾರಿ ನೋಡಿಕೊಳ್ಳಲಿದ್ದು, ಈ ಹಿಂದೆ ಪುತ್ತೂರು ಹಾಗೂ ಉಳ್ಳಾಲ ನಗರಸಭೆ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.