ಕಾಸರಗೋಡು ಮದರಸ ಅಧ್ಯಾಪಕ ಹತ್ಯೆ; ಸಮಗ್ರ ತನಿಖೆಗೆ ಜಿಲ್ಲಾ ಅಧ್ಯಕ್ಷ ಐ ಮೊಯ್ದಿನಬ್ಬ ಹಾಜಿ ಕರೆ
Update: 2017-03-21 20:30 IST
ಮಂಗಳೂರು,ಮಾ.21: ಕಳೆದ ರಾತ್ರಿ ಕಾಸರಗೋಡು ಚೂರಿ ಎಂಬಲ್ಲಿ ನಡೆದ ಕೊಟ್ಟಮುಡಿ ಆಝಾದ್ ನಗರ ನಿವಾಸಿ ರಿಯಾಜ್ ಮುಸ್ಲಿಯಾರವರ ಭೀಕರ ಹತ್ಯೆಯನ್ನು ದ.ಕ. ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಐ ಮೊಯ್ದಿನಬ್ಬ ಹಾಜಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಭೀಕರ ಕೊಲೆಯ ಹಿಂದಿರುವ ದುಷ್ಟಶಕ್ತಿಗಳನ್ನು ಕಾನೂನಿನಡಿಯಲ್ಲಿ ತಕ್ಷಣ ಬಂಧಿಸಿ, ಅಪರಾಧಿಗಳಿಗೆ ಉಗ್ರ ಶಿಕ್ಷೆಯನ್ನು ನೀಡಬೇಕೆಂದೂ, ಅಲ್ಪಸಂಖ್ಯಾತರ ಸಮುದಾಯ ಹಾಗೂ ಆರಾಧನಾಲಯಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದೂ ಸಂಬಂಧಪಟ್ಟವರಲ್ಲಿ ಆಗ್ರಹಿಸಿದ್ದಾರೆ.
ಸಮುದಾಯ ಬಾಂಧವರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಕಾಪಾಡಬೇಕೆಂದು ವಿನಂತಿಸಿದ್ದಾರೆ.
ಘಟನೆಗೆ ತೀವ್ರ ಸಂತಾಪವನ್ನು ಸೂಚಿಸುತ್ತಾ,ಮೃತರ ಹೆಸರಿನಲ್ಲಿ ಪ್ರತ್ಯೇಕ ಪ್ರಾರ್ಥನೆ ಹಾಗೂ ಮಯ್ಯಿತ್ ನಮಾಝ್ ನಿರ್ವಹಿಸಲು ಮುಸ್ಲಿಂ ಬಾಂಧವರಲ್ಲಿ ಪ್ರತ್ಯೇಕ ಪ್ರಕಟಣೆಯಲ್ಲಿ ಕೋರಲಾಗಿದೆ.