ಮುಂಡಗೋಡ : ಎಪಿಎಮ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವು

Update: 2017-03-22 11:17 GMT

ಮುಂಡಗೋಡ,ಮಾ.22 : ಎಪಿಎಮ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ.

ಮಾ.19 ರಂದು ನಡೆದ ನಡೆದ ಎಪಿಎಮ್‌ಸಿ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 8 ಹಾಗೂ ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿದೆ.

ಕಾಂಗ್ರೆಸ್ ಜಯಗಳಿಸಿದ ಕ್ಷೇತಗಳು : ವಿಜಯಲಕ್ಷ್ಮೀ ಹೀರೆಮಠ (ಹುನಗುಂದ),ಅಶೋಕ ತಡಸದ (ಇಂದೂರ), ದೇವು ಪಾಟೀಲ(ಮೈನಳ್ಳಿ) ,ಬಾಬಣ್ಣ ಲಾಡನವರ (ಚಿಗಳ್ಳಿ), ಬಾಬಣ್ಣ ಕೋಣನಕೇರಿ(ಪಾಳಾ), ಲಿಂಗನಗೌಡ ಪಾಟೀಲ(ಕಾತೂರ),ಕಲ್ಮೇಶಿ ವಾಲ್ಮೀಕಿ (ಸಾಲಗಾಂವ) ಹಾಗೂ ಮಂಜುನಾಥ ವರ್ಣೇಕರ(ಮುಂಡಗೋಡ).

ಬಿಜೆಪಿ ಜಯಗಳಿಸಿದ ಕ್ಷೇತ್ರಗಳು : ನಿಂಗಪ್ಪ ಕವಟೆ (ನಂದಿಗಟ್ಟಾ), ಶಿವಪ್ಪ ನಾಯಕ್(ಬೆಡಸ್‌ಗಾಂವ) ಹಾಗೂ ಸುಧಾ ಪಾಟೀಲ(ಮಳಗಿ)

ಕಾಂಗ್ರೆಸ್ ಎಂಟು ಸ್ಥಾನಗಳನ್ನು ಪಡೆದುಕೊಂಡು ಎಪಿಎಮ್‌ಸಿ ಅಧಿಕಾರ ಗದ್ದುಗೆ ಏರಲಿದೆ.

ಕಾಂಗ್ರೆಸ್ ಕಾರ್ಯಕರ್ತರು ಸಿಡಿಮದ್ದು ಸಿಡಿಸಿ ಎಪಿಎಮ್‌ಸಿ ಚುನಾಯಿತ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ನ  ಹಿರಿಯ ಧುರೀಣರು ಸೇರಿ ಮೆರವಣಿಗೆ ನಡೆಸಿದರು.

ಮೆರವಣಿಗೆಯಲ್ಲಿ ಚುನಾಯಿತ ಎಪಿಎಮ್‌ಸಿ ಸದಸ್ಯರು,ಕಾಂಗ್ರೆಸ್ ಅಧ್ಯಕ್ಷ ರವಿಗೌಡಾ ಪಾಟೀಲ, ಎಲ್.ಟಿ.ಪಾಟೀಲ, ರಫೀಕ್ ಇನಾಮದಾರ, ಮುಹಮ್ಮದ್ ಗೌಸ ಮಕಾನದಾರ, ಕೃಷ್ಣಾ ಹಿರೇಹಳ್ಳಿ, ಪಿ.ಎಸ್.ಸಂಗೂರಮಠ, ಲತೀಫ್ ನಾಲಬಂದ, ಅಲ್ಲಿಖಾನ ಪಠಾಣ, ರಾಮಕೃಷ್ಣ ಮೂಲಿನಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News