ಮದ್ರಸ ಅಧ್ಯಾಪಕ ಹತ್ಯೆ; ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಲಿ : ಕಾಂತಪುರಂ ಎ.ಪಿ ಉಸ್ತಾದ್

Update: 2017-03-22 12:33 GMT

ಕಾಸರಗೋಡು,ಮಾ.22:ಕಾಸರಗೋಡಿನ ಚೂರಿಯಲ್ಲಿ ಮದ್ರಸ ಅಧ್ಯಾಪಕರನ್ನು ದಾರುಣವಾಗಿ ಕೊಲೆಗೈದಿರುವ  ಹಂತಕರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

ಈ ಕೃತ್ಯವು ಅತ್ಯಂತ ದಾರುಣ ಹಾಗೂ ಖಂಡನೀಯವಾಗಿದ್ದು, ಕೋಮು ಸೌಹಾರ್ದ ಹಾಗೂ ಶಾಂತಿಗೆ ಮಾರಕವಾಗಿದೆ.

ಆರಾಧನಾಲಯಕ್ಕೆ ನುಸುಳಿ ನಡೆಸುವಂತಹ ಇಂತಹ ಕ್ರೂರ ಕೃತ್ಯ ಬೆಚ್ಚಿ ಬೀಳುವಂತೆ ಮಾಡಿದೆ. ನಮ್ಮ ನಾಡಿನ ಶಾಂತಿಯುತ ವಾತಾವರಣಕ್ಕೆ ಧಕ್ಕೆಯುಂಟುಮಾಡುವ ಗೂಢ ತಂತ್ರ ಈ ಕೃತ್ಯದ ಹಿಂದೆ ಅಡಗಿರುವ ಸಂದೇಹವಿದೆ.

ಇಂತಹ ಕೋಮು ದ್ವೇಷವನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಮುಂದಾಗಬೇಕಿದೆ. ಅಪರಾಧಿಗಳನ್ನು ಶೀಘ್ರ ಪತ್ತೆ ಹಚ್ಚಿ ಕಾನೂನಿನ ಮುಂದೆ ತರಬೇಕು ಮತ್ತು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಹೇಳಿದರು.

ಕೋಮು ಸಂಘರ್ಷವನ್ನುಂಟು ಮಾಡಿ ಶಾಂತಿ ಕದಡಲು ಶ್ರಮಿಸುವ ಎಲ್ಲಾ ಗೂಢ ತಂತ್ರಗಳ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಈ ಕೃತ್ಯದಲ್ಲಿ ಅತೀವ ದುಃಖಿತನಾಗಿದ್ದು , ಭಾವನಾತ್ಮಕವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಶಾಂತಿ ಕಾಪಾಡ ಬೇಕೆಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News