ಕೇರಳ: ಮಾ.26ರಂದು ಅಝ್ಹರಿ ಸನದು ದಾನ ಸಮ್ಮೇಳನ

Update: 2017-03-23 06:28 GMT

ಕಣ್ಣೂರು, ಮಾ.23: ಕಣ್ಣೂರು ಜಿಲ್ಲೆಯ ಇತಿಹಾಸ ಪ್ರಸಿದ್ದ ಪುಲಿಂಗೋಂ ಮಖಾಂ ಉರೂಸ್ ಹಾಗೂ ದಾರುಲ್ ಅಝ್ಹರ್ ಶರೀಅತ್ ಕಾಲೇಜ್ ಸನದು ದಾನ ಸಮ್ಮೇಳನ ಮಾರ್ಚ್ 23ರಿಂದ 27ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮಾರ್ಚ್ 26ರಂದು ಸಂಜೆ ಪುಲಿಂಗೋಂ ದಾರುಲ್ ಅಝ್ಹರ್ ಶರೀಅತ್ ಕಾಲೇಜಿನ ಸನದು ದಾನ ಸಮ್ಮೇಳನ ನಡೆಯಲಿದ್ದು ಪಾಣಕ್ಕಾಡ್ ಸಯ್ಯದ್ ಹಮೀದಲೀ ಶಿಹಾಬ್ ತಂಙಳ್ ಉದ್ವಾಟಿಸಲಿದ್ದಾರೆ.

ಸಮಸ್ತದ ಅಧ್ಯಕ್ಷ ಸಯ್ಯದ್ ಜಿಫ್ರೀ ಮುತ್ತುಕೋಯ ತಂಙಳ್ ಸನದು ದಾನ ಪ್ರಭಾಷಣ ಮಾಡಲಿದ್ದು, ದಾರುಲ್ ಅಝ್ಹರ್ ಪ್ರಿನ್ಸಿಪಾಲ್ ಶೈಖುನಾ ಪಿ.ಕೆ.ಅಬೂಬಕ್ಕರ್ ಫೈಝಿ ವಿದ್ಯಾರ್ಥಿಗಳಿಗೆ ಮೌಲವಿ ಫಾಝಿಲ್ ಅಝ್ಹರಿ ಸನದು ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಪ್ರಭಾಷಣವನ್ನು ಅನ್ವರ್ ಮೊಹ್ಯುದ್ದೀನ್ ಹುದವಿ ಆಲುವಾ ಮಾಡಿಲಿದ್ದಾರೆ.

ಆ ದಿನ ಮಧ್ಯಾಹ್ನ ಕಾಲೇಜ್ ಕ್ಯಾಂಪಸ್ ನಲ್ಲಿ ಅಝ್ಹರೀಸ್ ಸಂಗಮ ನಡೆಯಲಿದ್ದು ಎಲ್ಲಾ ಅಝ್ಹರಿಗಳು ಭಾಗವಹಿಸುವಂತೆ ಹಾಗೂ ಸನದು ದಾನ ಸಮ್ಮೇಳನ ವಿಜಯಗೊಳಿಸುವಂತೆ ಅಝ್ಹರೀಸ್ ದ.ಕ.ಅಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್ ಹಾಗೂ ಪ್ರಧಾನ ಕಾರ್ಯದರ್ಶಿ ರಝ್ಝಾಕ್ ಅಝ್ಹರಿ ಸವಣೂರು ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News