ಬಂದರ್ ಕಸೈಗಲ್ಲಿ: ಆಧಾರ್ ಕಾರ್ಡ್ ನೋಂದಣಿಗೆ ಚಾಲನೆ

Update: 2017-03-23 07:49 GMT

ಮಂಗಳೂರು, ಮಾ.23: ರಾಜ್ಯ ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ನೇತೃತ್ವದಲ್ಲಿ ಬಂದರ್ ಕಸೈಗಲ್ಲಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಐವನ್ ಡಿಸೋಜ ಪ್ರಸ್ತುತ ಆಧಾರ್‌ಕಾರ್ಡ್ ಕಡ್ಡಾಯ ಮಾಡಲಾಗಿದೆ. ಇಲ್ಲಿ ತೆರೆಯಲಾದ ನೋಂದಣಿ ಪ್ರಕ್ರಿಯೆಯ ಪ್ರಯೋಜನ ಪಡೆಯಲು ಸೂಚಿಸಿದರು.

  ಈ ಸಂದರ್ಭ ಬೂಬುಕಾ ಜುಮಾ ಮಸೀದಿಯ ಖತೀಬ್ ಸಿರಾಜುದ್ದೀನ್ ಫೈಝಿ, ಮಾಜಿ ಕಾರ್ಪೊರೇಟರ್ ಜೆ. ನಾಗೇಂದ್ರ ಕುಮಾರ್, ಬಂದರ್ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಡಿ.ಎಂ. ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಆರಿಫ್‌ಬಾವಾ, ನೌಶಾದ್, ಅನಿಲ್ ತೋರಸ್ ಜಪ್ಪು, ಶಶಿಕಾಂತ್ ಶೆಟ್ಟಿ ಜಪ್ಪಿನಮೊಗರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News