ಅಂಗನವಾಡಿ ನೌಕರರಿಗೆ ಬೆಂಬಲ ಸೂಚಿಸಿ ಮಂಗಳೂರಿನಲ್ಲಿ ಹಮಾಲಿ ಕಾರ್ಮಿಕರ ಮೆರವಣಿಗೆ
Update: 2017-03-23 07:54 GMT
ಮಂಗಳೂರು, ಮಾ.23:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನದಿಂದ ನಡೆಯುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಂಗಳೂರು ಬಂದರ್ ದಕ್ಕೆಯ ಎಡಪಕ್ಷಗಳ ಅಧೀನದ ಕಾರ್ಮಿಕ ಸಂಘಟನೆಯಾದ ಬಂದರ್ ಶ್ರಮಿಕರ ಸಂಘದಿಂದ ಹಮಾಲಿ ಕಾರ್ಮಿಕರು ಗುರುವಾರ ಮೆರವಣಿಗೆ ನಡೆಸಿದರು.
ಬಂದರ್ ಶ್ರಮಿಕ ಸಂಘದ ಮುಖಂಡ ಬಿ.ಕೆ.ಇಮ್ತಿಯಾಝ್ ನೇತೃತ್ವದಲ್ಲಿ ಕಾರ್ಮಿಕರು ಸರಕಾರದ ಕಾರ್ಯವೈಖರಿಯ ವಿರುದ್ಧ ಘೋಷಣೆ ಕೂಗಿ ದಕ್ಕೆಯ ವಿವಿಧ ರಸ್ತೆಗಳಲ್ಲಿ ರ್ಯಾಲಿಯೊಂದಿಗೆ ಪ್ರತಿಭಟನಾ ಸಭೆ ನಡೆಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್, ಎಂ.ಆರ್. ಇಸ್ಮಾಯೀಲ್ ಇರಾ, ಚಂದ್ರಹಾಸ ಬಬ್ಬುಕಟ್ಟೆ, ಹಸನ್ ಮೋನು ಬೆಂಗರೆ, ಮಾಧವ ಕಾವೂರು, ಹರೀಶ್ ಕೆರೆಬೈಲ್ ಮತ್ತಿತರರು ಪಾಲ್ಗೊಂಡಿದ್ದರು.