ದುಷ್ಕರ್ಮಿಗಳಿಂದ ದಿನಸಿ ಅಂಗಡಿಗೆ ಬೆಂಕಿ

Update: 2017-03-23 12:44 GMT

ಕಾಸರಗೋಡು, ಮಾ.23: ದಿನಸಿ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಶುಕ್ರವಾರ ಮುಂಜಾನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.

ಮೊಗ್ರಾಲ್ ಕಡವತ್ ನ  ಎಂ. ಸತೀಶ್ ಎಂಬವರ ಅಂಗಡಿಗೆ ಬೆಂಕಿ ಹಚ್ಚಲಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಮೇಲಂತಸ್ತಿನ ಕೊಠಡಿಯಲ್ಲಿ ಮಲಗಿದ್ದವರು  ಹೊಗೆ ಬರುತ್ತಿರುವುದನ್ನು ಕಂಡು ಗಮನಿಸಿದಾಗ ಬೆಂಕಿ ಹರಡಿರುವುದು ಗಮನಕ್ಕೆ ಬಂದಿದ್ದು,  ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು. 

ಈ ಕೃತ್ಯವನ್ನು ಖಂಡಿಸಿ ವರ್ತಕರು ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಅಂಗಡಿ ಮುಚ್ಚಿ ಹರತಾಳ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News