ಕಾಸರಗೋಡು: ಇಂದಿನಿಂದ ರಾತ್ರಿ ವೇಳೆ ಬೈಕ್ ಸಂಚಾರ ನಿಷೇಧ

Update: 2017-03-23 12:52 GMT

ಕಾಸರಗೋಡು, ಮಾ.23: ಕಾಸರಗೋಡು ಸುತ್ತಮುತ್ತ ಅಹಿತಕರ ಘಟನೆ ಮರುಕಳಿಸುತ್ತಿರುವ ಹಿನ್ನಲೆಯಲ್ಲಿ ಕಾಸರಗೋಡು, ಮಂಜೇಶ್ವರ ತಾಲೂಕಿನಲ್ಲಿ ರಾತ್ರಿ ದ್ವಿಚಕ್ರ ವಾಹನ ಸಂಚಾರವನ್ನು ನಿಷೇಧಿಸಲಾಗಿ ಆದೇಶ ಹೊರಡಿಸಲಾಗಿದೆ.

ಇಂದು (ಮಾ.23)ರಾತ್ರಿಯಿಂದ ಇನ್ನೊಂದು ಮಾಹಿತಿ ನೀಡುವ ತನಕ ನಿಷೇಧ ಜಾರಿಯಲ್ಲಿರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ಸಿಮೋನ್ ತಿಳಿಸಿದ್ದಾರೆ.

ರಾತ್ರಿ 10:30ರಿಂದ ಬೆಳಗ್ಗೆ 6 ಗಂಟೆಯವರೆಗೆ ಈ ಭಾಗದಲ್ಲಿ   ದ್ವಿಚಕ್ರ ವಾಹನ ಸಂಚಾರ ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಕೆ.ಜಿ ಸಿಮೋನ್ ತಿಳಿಸಿದ್ದಾರೆ.

ಬೈಕ್ ಸೇರಿದಂತೆ ದ್ವಿಚಕ್ರ ವಾಹನಗಳಲ್ಲಿ ತಲುಪಿ ದುಷ್ಕೃತ್ಯ ನಡೆಸಲಾಗುತ್ತಿದ್ದು, ಈ ಕುರಿತು ಲಭಿಸಿದ ಮಾಹಿತಿಯಂತೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿಂದೆಯೂ ಕಾಸರಗೋಡಿನಲ್ಲಿ ಅಹಿತಕರ ಘಟನೆ ನಡೆದ ಸಂದರ್ಭದಲ್ಲೂ ರಾತ್ರಿ ವೇಳೆ ಬೈಕ್ ಸಂಚಾರ ನಿಷೇಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News