ಅತ್ತೆಯ ಮನೆಯಲ್ಲಿ ಚಿನ್ನ ಕದ್ದ ಚೋರ ಈಗ ಪೊಲೀಸರ ಅತಿಥಿ !

Update: 2017-03-24 17:29 GMT

ಪುತ್ತೂರು, ಮಾ.23: ತಾಲೂಕಿನ ಪಡುವನ್ನೂರು ನಿವಾಸಿ ಸೀತಾ ಎಂಬವರ ಮನೆಯಿಂದ ಚಿನ್ನಾಭರಣವನ್ನು ಕಳವು ಮಾಡಿದ್ದ ಆರೋಪಿಯನ್ನು ಸಂಪ್ಯ ಗ್ರಾಮಾಂತರ ಪೊಲೀಸರು ಬಂದಿಸಿದ್ದಾರೆ.

ಹೊಸಕೋಟೆ ತಾಲೂಕು ಬೋಧನ ಹಳ್ಳಿ ನಿವಾಸಿ ಅನಿಲ್ ಬಂಧಿತ ಆರೋಪಿ. ಸೀತಾ ಅವರ ಅಳಿಯನಾಗಿದ್ದು, ತನ್ನ ಅತ್ತೆಯ ಮನೆಗೆ ಆಗಮಿಸಿದ್ದು, ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಕಪಾಟಿನಲ್ಲಿದ್ದ ಸುಮಾರು 60 ಸಾವಿರ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದ.

ಈ ಬಗ್ಗೆ ಸೀತಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿ, ಅಳಿಯನ ವಿರುದ್ದ ಶಂಕೆ ವ್ಯಕ್ತ ಪಡಿಸಿದ್ದರು. ತಕ್ಷಣವೇ ಕಾರ್ಯಪ್ರವರ್ತರಾದ ಪೊಲೀಸರು ಚಿನ್ನ ಮಾರಾಟ ಮಾಡುವ ಉದ್ದೇಶದಿಂದ ಪುತ್ತೂರಿಗೆ ಆಗಮಿಸಲು ಮೈಂದನಡ್ಕ ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಕಳವಾದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಾಗಿದ್ದು, ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News