ನಾಳೆ ತಾಜುಲ್ ಉಲಮಾ ಅನುಸ್ಮರಣೆ
Update: 2017-03-24 18:28 GMT
ಬಂಟ್ವಾಳ, ಮಾ.24: ಎಸ್ಸೆಸ್ಸೆಫ್ ಮೇಗಿನಪೇಟೆ ವಿಟ್ಲ ವತಿಯಿಂದ ಸುನ್ನಿ ಆದರ್ಶ ಸಮ್ಮೇಳನ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ಮಾ.26ರಂದು ಸಂಜೆ ವಿಟ್ಲದ ಮೇಗಿನ ಪೇಟೆಯಲ್ಲಿ ನಡೆಯಲಿದೆ. ಅಸ್ಸೈಯದ್ ಮುಹಮ್ಮದ್ ತಂಙಳ್ ಕಬಕ ದುಆಶೀರ್ವಚನ ನೀಡಲಿದ್ದು, ಎಸ್ಸೆಸ್ಸೆಫ್ ವಿಟ್ಲ ಡಿವಿಜನ್ ಅಧ್ಯಕ್ಷ ವಿ.ಎಂ.ಅಬೂಬಕರ್ ಸಖಾಫಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.