×
Ad

ಕಾಸರಗೋಡು: ಅಣೆಕಟ್ಟು ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು

Update: 2017-03-28 09:35 IST

ಕಾಸರಗೋಡು, ಮಾ.28: ಅಣೆಕಟ್ಟಿನ ನೀರಿನಲ್ಲಿ  ಸ್ನಾನ ಮಾಡುತ್ತಿದ್ದ  ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಪಾಣತ್ತೂರಿನಲ್ಲಿ ನಡೆದಿದೆ.

ಮೃತಪಟ್ಟವನನ್ನು  ಪಾಣತ್ತೂರು ಚೀರಕಡವಿನ ಡೋಮಿನಿಕ್ ಆಂಟನಿ (18) ಎಂದು ಗುರುತಿಸಲಾಗಿದೆ.  ಸಂಜೆ 7 ಗಂಟೆ ಸುಮಾರಿಗೆ ಸ್ನೇಹಿತರ ಜೊತೆ  ಚೀರಕಡವಿನ  ಅಣೆಕಟ್ಟು ತುಂಬಿದ್ದ ನೀರಿನಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಜೊತೆಗಿದ್ದವರ ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದು ಆತನನ್ನು ಮೇಲಕ್ಕೆತ್ತಿ  ಕಾಞ೦ಗಾಡ್ ಆಸ್ಪತ್ರೆಗೆ ದಾಖಲಿಸಿದರೂ ತಡರಾತ್ರಿ ಮೃತಪಟ್ಟಿದ್ದಾನೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News