ರೈತನನ್ನು ನುಂಗಿದ ಹೆಬ್ಬಾವು
Update: 2017-03-29 13:46 GMT
ಜಕಾರ್ತ, ಮಾ.29: ರೈತನೊಬ್ಬನನ್ನು ದೈತ್ಯ ಹೆಬ್ಬಾವು ನುಂಗಿದ ಘಟನೆ ಇಂಡೋನೆಷ್ಯಾದಲ್ಲಿ ನಡೆದಿದೆ.
25ರ ಹರೆಯದ ರೈತ ಅಕ್ಬರ್ ಎಂಬವರನ್ನು 23 ಅಡಿ ಉದ್ದದ ಹೆಬ್ಬಾವು ನುಂಗಿದ್ದು, ಹೆಬ್ವಾವಿನ ಹೊಟ್ಟೆ ಸೀಳಿ ಆತನ ಮೃತದೇಹವನ್ನು ಹೊರ ತೆಗೆಯಲಾಗಿದೆ.
ಸುಲಾವೆಸಿ ಪೂರ್ವ ದ್ವೀಪದ ಸಾಲುಬಿರೊ ಗ್ರಾಮದಲ್ಲಿ ತಾಳೆ ಹಣ್ಣು ಕೊಯ್ಯಲು ತೆರಳಿದ್ದ ಅಕ್ಬರ್ ಮನೆಗೆ ಮರಳಿ ಬಾರದೆ ಕಾಣೆಯಾಗಿದ್ದರು. ಆತನನ್ನು ಹೆಬ್ಬಾವು ಇಡಿಯಾಗಿ ನುಂಗಿತ್ತು. ಅಕ್ಬರ್ ಮನೆ ಮಂದಿ ತಾಳೆಯ ತೋಟದಲ್ಲಿ ಹುಡುಕಾಡಿದಾಗ ಹೆಬ್ವಾವೊಂದು ಮಲಗಿರುವುದು ಕಂಡು ಬಂತು. ಪಕ್ಕದಲ್ಲೇ ಅಕ್ಬರ್ ತಾಳೆ ಹಣ್ಣು ಕೊಯ್ಯಲು ಬಳಸುವ ಸಲಕರಣೆ ಮತ್ತು ಅವರ ಬೂಟ್ ಪತ್ತೆಯಾಗಿತ್ತು.
ಅನುಮಾನಗೊಂಡ ಸ್ಥಳೀಯರು ಹೆಬ್ಬಾವನ್ನು ಹಿಡಿದು ಅದರ ಹೊಟ್ಟೆ ಸೀಳಿದರು. ಅಕ್ಬರ್ನ ಮೃತದೇಹವನ್ನು ಹೆಬ್ಬಾವಿನ ಹೊಟೆಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು.