ನಾಳೆ ಕಾಸರಗೋಡಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್

Update: 2017-03-29 15:12 GMT

ಕಾಸರಗೋಡು, ಮಾ.29: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಕಾಸರೋಡಿಗೆ  ಆಗಮಿಸಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ

ಬೆಳಗ್ಗೆ 10 ಗಂಟೆಗೆ  ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಎಂಡೋಸಲ್ಫಾನ್ ಸಂತ್ರಸ್ಥರಿಗಿರುವ ಸಹಾಯಧನವನ್ನು ಮುಖ್ಯಮಂತ್ರಿ ವಿತರಿಸಲಿದ್ದಾರೆ.  ತದನಂತರ ಪಡನ್ನಕಾಡ್  ಕೃಷಿ ಕಾಲೇಜಿನ ನಡೆಯುವ ವಿವಿಧ  ಕಾರ್ಯಕ್ರಮಗಳಲ್ಲಿ  ಪಾಲ್ಗೊಳ್ಳಲಿದ್ದಾರೆ.

ಸಂಜೆ ಮೂರು ಗಂಟೆಗೆ ಪಯ್ಯನ್ನೂರು ಏಳಿಮಲೆ ನೌಕಾ ಅಕಾಡಮಿಯ ಸಭೆಯಲ್ಲಿ ಪಾಲ್ಗೊಂಡು ಬಳಿಕ ಕರಿಪ್ಪೂರು ವಿಮಾನ ನಿಲ್ದಾಣ ಮೂಲಕ ತಿರುವನಂತಪುರಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News